


ಹಾವೇರಿ: ಲೋಕಾಯುಕ್ತದಾಳಿ-ಇರ್ವರು ಅಧಿಕಾರಿ ಕುಬೇರರ ಬಳಿ ಕೋಟ್ಯಾಂತರ ಆಸ್ತಿ-ಪಾಸ್ತಿ ಪತ್ತೆ
ಹಾವೇರಿ: ಲೋಕಾಯುಕ್ತದಾಳಿ-ಇರ್ವರು ಅಧಿಕಾರಿ ಕುಬೇರರ ಬಳಿ ಕೋಟ್ಯಾಂತರ ಆಸ್ತಿ-ಪಾಸ್ತಿ ಪತ್ತೆ
ಹಾವೇರಿ/ರಾಣೇಬೆನ್ನೂರ : ಅಸಮತೋಲಿತ ಆಸ್ತಿ ಸಂಗ್ರಹಣೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ ಕೋಟ್ಯಾಂತರರೂ ಮೌಲ್ಯದ ನಗ-ನಾಣ್ಯ, ಆಭರಣಗಳು, ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕಂದಾಯ ನಿರೀಕ್ಷಕ ಅಶೋಕ್ ಅರಳೇಶ್ವರ ಅವರ ಮನೆ ಮತ್ತು ಕಚೇರಿ ಮೇಲೆ, ಸವಣೂರು ತಾಲೂಕು ಪಂಚಾಯತ್ ಇಓ ಬಸವೇಶ್ವರ ಶಿಡೇನೂರು ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮನೆ ಮತ್ತು ಕಚೇರಿಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಕೋಟಿ ಒಡೆಯಕಂದಾಯ ನೀರಿಕ್ಷಕ: ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಕಂದಾಯ ನೀರಿಕ್ಷಕ ಅಶೋಕ ಅರಳೇಶ್ವರ ಬಳಿ ಒಟ್ಟು ೧ ಕೋಟಿ ೩೫ ಲಕ್ಷ ೯೬ ಸಾವಿರ ೪೬೨ ರುಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಎರಡು ಐಶಾರಾಮಿ ಮನೆ, ಎರಡು ಸೈಟ್, ೧೧ ಎಕರೆ ಜಮೀನು, ಚಿನ್ನಾಭರಣ ಸೇರಿ ಕೋಟಿ ರುಪಾಯಿ ಆಸ್ತಿ ಒಡೆಯರಾಗಿದ್ದಾರೆ.
ಇಓ ಕೋಟೆಪ್ಪ: ಜಿಲ್ಲೆಯ ಸವಣೂರು ತಾಲ್ಲೂಕು ಪಂಚಾಯತಿ ಇಓ ಬಸವೇಶ ಶಿಡೇನೂರು ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ವೇಳೆ ರಾಣೇಬೆನ್ನೂರು ನಗರದಲ್ಲಿ ೬ ಸೈಟ್ , ಒಂದು ಮನೆ, ಚಿನ್ನಾಭರಣ ಸೇರಿದಂತೆ ವಿವಿಧ ದಾಖಲೆಗಳ ಜಪ್ತಿ ಮಾಡಿದ ಲೋಕಾಯುಕ್ತ ಪೊಲೀಸರು ಕೋಟ್ಯಾಂತರ ರುಪಾಯಿಮೌಲ್ಯದ ಆಸ್ತಿಯ ಬಗ್ಗೆ ಮಾಹಿತಿನೀಡಿದ್ದು, ೧ ಕೋಟಿ ೬೭ ಲಕ್ಷ ,೧೮ ಸಾವಿರ ಮೌಲ್ಯದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ನೇತ್ರತ್ವದಲ್ಲಿ ದಾಳಿನಡೆದಿದ್ದು, ದಾಳಿ ವೇಳೆ ಕೋಟ್ಯಾಂತರ ಆಸ್ತಿ ಪತ್ರ, ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

