
ಹಾವೇರಿ: ಕೆ.ಎಸ್.ಆರ್ಟಿಸಿ ಪ್ಲಾಟ್ಫಾರ್ಮ್ಗೆ ನುಗ್ಗಿದ ಬಸ್ ; ಬಾಲಕನ ಮರಣ -ನಾಲ್ವರಿಗೆ ಗಾಯ
ಹಾವೇರಿ: ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಏ.೧ರಂದು ಬುಧವಾರ ಬೆಳಿಗ್ಗೆ ೬-೩೦ ವೇಳೆಗೆ ಬಸ್ ನಿಲುಗಡೆ ವೇಳೆ ವೇಗವಾಗಿ ಬಂದ ವಾಯವ್ಯ ಕರ್ನಾಟಕ ಸಾರಿಗೆ ಬಸ್ ನಿಲ್ದಾಣದ ಪ್ಲಾಟ್ಫಾರ್ಮ್ ಮೇಲೆ ಹತ್ತಿ, ಅಲ್ಲಿದ್ದ ಜನರಿಗೆ ಡಿಕ್ಕಿ ಹೊಡೆದು ೨ ವರ್ಷದ ಬಾಲಕ ಮರಣ ಹೊಂದಿದ್ದು, ಇತರ ಮೂವರು ಗಾಯಗೊಂಡಿರುವ. ದುರ್ಘಟನೆ ನಡೆದಿದೆ.
ಬಸ್ ಡಿಕ್ಕಿಯಾಗಿ ಗಾಯಗೊಂಡ ಎರಡು ವರ್ಷದ ಮಗು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ. ಮೃತಪಟ್ಟ ಮಗುವನ್ನು ಸವಣೂರು ಪಟ್ಟಣದ ಹಜರತ್ ಅಲಿ ಎಂದು ಗುರುತಿಸಲಾಗಿದೆ. ಇನ್ನುಳಿದ ಮೂವರು ಗಾಯಾಳುಗಳಾದ ವಾಸುದೇವ (೪೪), ಹರ್ಷಾ (೬) ಹಾಗೂ ಕಾವ್ಯಾಂಜಲಿ (೩೯) ಎಂಬವರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲರೂ ಬಂಕಾಪುರ ಪಟ್ಟಣದ ನಿವಾಸಿಗಳು.

