ಇ-ಸ್ವತ್ತಿಗೆ ಲಂಚಕ್ಕೆ ಬೇಡಿಕೆ,ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಪಿಡಿಓ- ಬಿಲ್ ಕಲೆಕ್ಟರ್ ಬಂಧನ
ಹಾವೇರಿ:ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಮತ್ತು ಬಿಲ್ಲೆಕ್ಟರ್
ಇ-ಸ್ವತ್ತಿಗೆ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಯಲ್ಲಿ ಇವರುಗಳನ್ನು ಗುರುವಾರ
ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದರ.
ಜಗದೀಶ ಮುಟ್ಟಿಸಿದ್ದಮ್ಮನವರ ಸಾ:ನಿಪಟಳ್ಳಿ ಇವರು ತಮ್ಮ ತಂದೆಯ ಹೆಸರಿನಲ್ಲಿ ಇ-ಸ್ವತ್ತು ಉತಾರಕ್ಕೆ ಲಿಂಗದಹಳ್ಳಿ ಗ್ರಾಮ ಪಂಚಾಯತಿಗೆ ಅರ್ಜಿಯನ್ನು ಸಲ್ಲಿಸಿದ್ದರು.
ಆಪಾಧಿತರಾದ ಕೇಶವಮೂರ್ತಿ ರಾಠೋಡ, ಪಿಡಿಓ, ಗ್ರಾ.ಪಂ. ಲಿಂಗದಹಳ್ಳಿ ಮತ್ತು ಪರಮೇಶ್ವರಪ್ಪ ಉಜ್ಜನಗೌಡ್ರ, ಬಿಲ್ ಕಲೆಕ್ಟರ್, ಗ್ರಾ.ಪಂ., ಲಿಂಗದಹಳ್ಳಿ ಇವರು ಇ-ಸ್ವತ್ತು ಉತಾರವನ್ನು ನೀಡಲು ಸರ್ಕಾರಿ ಶುಲ್ಕ ರೂ.50/-ಗಳು ಇದ್ದರು ಸಹ ರೂ.2500/-ಗಳ ಲಂಚದ ಹಣಕ್ಕೆ ಬೇಡಿಕೆಯನ್ನು ಇಟ್ಟು ತಮ್ಮ ಅಧಿಕಾರದ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು, ಅಪರಾಧಿಕ ದುರ್ನಡತೆಯನ್ನು ತೋರಿಸಿದ ಬಗ್ಗೆ ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಲೋಕಾಯುಕ್ತರು, ಬೆಂಗಳೂರು ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಸದರಿ ಆರೋಪಿತರಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಕೇಶವ ಮೂರ್ತಿ
ಮತ್ತು ಬಿಲ್ಲೆಕ್ಟರ್ ಪರಮೇಶ್ವರಪ್ಪ
ಇವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.