ಎಲಕ್ಕಿ ಕಂಪಿನ ಹಾವೇರಿನಗರದಲ್ಲಿ ಗಮನ ಸೆಳೆದ ೬ ಜಿಲ್ಲೆಗಳ ದೇಹದಾಢ್ಯ ಸ್ಪರ್ಧಾಳುಗಳ ಸ್ಪರ್ಧೆ
ಹಾವೇರಿ: ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಎಲಕ್ಕಿ ಕಂಪಿನ ಕ್ಯಾತಿಯ ಹಾವೇರಿನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಫೆ.೪ರಂದು ಸಂಜೆ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ ಐರನ್ ಫಿಟ್ನೆಸ್ ಜಿಮ್ ಹಾವೇರಿ ಇವರ ವತಿಯಿಂದ ಪ್ರಥಮ ಬಾರಿಗೆ ಆಯೋಜಿಸಿದ್ದ ಹಾವೇರಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಚಿತ್ರದುರ್ಗ ಜಿಲ್ಲೆಗಳ ದೇಹದಾಢ್ಯ ಸ್ಪರ್ಧಾಳುಗಳ ದೇಹದಾಢ್ಯ ಸ್ಪರ್ಧೆ ಜನಮನ ಸೆಳೆದು ಯಶಸ್ವಿಯಾಗಿ ಜರುಗಿತು.
೬ ಜಿಲ್ಲೆಗಳ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಬೆಳಗಾವಿಯ ವಿಕಾಸ ಸೂರ್ಯವಂಶಿ ಟೈಟಲ್ ಮಿಸ್ಟರ್ ಹಾವೇರಿ-೨೦-೨೩ ಪ್ರಥಮ ಬಹುಮಾನ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು ಬೆಳಗಾವಿ ಪ್ರತಾಪ್ ಕಲಕುಂದರಕರ, ಬೆಸ್ಟ್ ಪೋಜರ್ ಪ್ರಶಸ್ತಿಯನ್ನು ಉಮೇಶ ಗಂಗಾನೆ, ಬೆಳಗಾವಿ ಇವರು ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಆರುಜಿಲ್ಲೆಯಿಂದ ೧೦೦ಕ್ಕೂ ಅಧಿಕ ದೇಹದಾರ್ಡ್ಯ ಪಟುಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ತಾವರಗಿ ಪ್ರಶಸ್ತಿಗಳನ್ನು ವಿತರಿಸಿದರು. ದೇಹದಾಢ್ಯ ಸ್ಪರ್ಧೆಯ ಆಯೋಜಕ, ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಜಮೀರಹ್ಮದ ಜಿಗರಿ, ಹಾವೇರಿಯ ಶಿವಯೋಗೇಶ್ವರನಗರದ ಐರನ್ ಪಿಟ್ನೆಸ್ ಜಿಮ್ ಪೈರೋಜಲಿ ನಲಬಂದ್ ಮತ್ತಿತರರು ಈ ವೇಳೆ ಹಾಜರಿದ್ದರು.
ಉದ್ಘಾಟನೆ: ಮಾಜಿ ಸಚಿವ ರುದ್ರಪ್ಪ ಲಮಾಣಿ ದೇಹದಾಢ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಮೈಸೂರು ದಸಾರ ಸೇರಿದಂತೆ ಅನೇಕ ಜಾತ್ರೆಗಳಲ್ಲಿ ದೇಹದಾಢ್ಯ ಸ್ಪರ್ಧೆಯ ಜೊತೆಗೆ ಕುಸ್ತಿ ಪಂದ್ಯಗಳು ಜರುಗುತ್ತಿದ್ದವು. ಆದರೆ ಕ್ರಮೇಣವಾಗಿ ನಮ್ಮ ಜಾನಪದ ಸಾಹಸ ಕಲೆಗಳು ಕಣ್ಮರೆಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಯುವಕರು ದೇಹದಾಢ್ಯದ ಕಡೆಗೆ ಗಮನ ಹರಿಸುತ್ತಿರುವುದುದು ಸ್ವಾಗತರ್ಹಾವಾಗಿದ್ದು, ನುರಿತ ಹಿರಿಯ ದೇಹದಾಢ್ಯ ಕ್ರೀಡಾಪಟುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಹಾವೇರಿಯಲ್ಲಿ ಕಳೆದ ತಿಂಗಳು ಜರುಗಿದ ಸಾಹಿತ್ಯ ಸಮ್ಮೇಳನ ರಾಜ್ಯದ ಜನರ ಗಮನ ಸೆಳೆದಿತ್ತು, ಇದಿಗ ಇಷ್ಟುದೊಡ್ಡಸಂಖ್ಯೆಯಲ್ಲಿ ಯುವಕರ ಸಮ್ಮುಖದಲ್ಲಿ ಜರುಗಿದ ದೇಹದಾಢ್ಯ ಸ್ಪರ್ಧೆಯಲ್ಲಿ ಮತ್ತೊಮ್ಮೆಹಾವೇರಿ ಜನರ ಗಮನ ಸೆಳೆದಿದೆ.ಈರೀತಿಯ ಸ್ಪರ್ಧೆಗಳ ಆಗಾಗ ನಡೆಯಬೇಕೆಂದು ಅವರು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ,ಡಾ. ಸಂಜಯ ಡಾಂಗೆ, ಈರಪ್ಪ ಲಮಾಣಿ, ಗಿರೀಶ ಸ್ವಾದಿ, ಕೆ.ಎಚ್.ನಾಯಕ್, ಮಂಜುನಾಥ ಶೆಟ್ಟಿ, ತಿಪ್ಪಣ್ಣ ಕುಂಬಾರ್, ಬಸವರಾಜ ಮಾಳಗಿ, ಪ್ರಭು ಬಿಸ್ಟನಗೌಡ್ರ, ಕೆ.ಬಿ.ಮಲ್ಲಿಕಾರ್ಜುನ್, ಜಗದೀಶ ಬೆಟಗೇರಿ, ಎಂ ಎಂ ನಾಯಕ್ ಉಮೀದ್ ನಾದಾಫ್, ಮೌಲಾಸಾಬ ಜಿಗರಿ, ಹಜರತಲಿ ತಹಶೀಲ್ದಾರ, ಡಾ. ಗುರುರಜ್ ಕಲಾಲ, ಇಸ್ಮಾಯಿಲ್ ಮಲ್ಲಾಡದ, ಅಲ್ತಾಪ್ ಚೋಪದಾರ, ರಾಯಲ್ ಸಾದೀಕ್, ಜೀಲಾನಿ ಶೋಕತ್ ಮಾಗಳ, ಜಬ್ಬರ್ ಅಲಿ ನಾಲಬಂದ್ ಮತ್ತಿತರು ಭಾಗವಹಿಸಿದ್ದರು. ದೇಹದಾಢ್ಯ ಸ್ಪರ್ಧೆಯ ಆಯೋಜಕ, ಜಮೀರಹ್ಮದ ಜಿಗರಿ ಸ್ವಾಗತಿಸಿದರು, ನಾಗರಾಜ ನಡುವಿನಮಠ ನಿರೂಪಿಸಿದರು.
ವಿಭಾಗಗಳ ವಿಜೇತರ ವಿವರ:
ಮಿಸ್ಟರ್ ಹಾವೇರಿ-೨೦-೨೩ ಪ್ರಥಮ ಬಹುಮಾನ ಟೈಟಲ್ ವಿಕಾಸ ಸೂರ್ಯವಂಶಿ ಬೆಳಗಾವಿ.
ದ್ವಿತೀಯ ಬಹುಮಾನ ಪ್ರತಾಪ್ ಕಲಕುಂದರಕರ, ಬೆಳಗಾವಿ.
ಬೆಸ್ಟ್ ಪೋಜರ್: ಉಮೇಶ ಗಂಗಾನೆ, ಬೆಳಗಾವಿ.
೫೫ಕೆಜಿ ವಿಭಾಗ: ಪ್ರಥಮ ಸಲ್ಮಾನಖಾನ್ ಶಿವಮೊಗ್ಗ. ದ್ವಿತೀಯ ಮಹ್ಮದಸಾಧಿಕ್, ಧಾರವಾಡ. ತ್ರತೀಯ ನಿತೇಶ ಗೋರಳ ಬೆಳಗಾವಿ. ಚತುರ್ಥ ಮಹ್ಮದರಫೀಕ್ ಧಾರವಾಡ. ಪಂಚಮ ಬಹುಮಾನ ಅಬು ಹಾವನೂರ ಹಾವೇರಿ.
೬೦ಕೇಜಿ ವಿಭಾಗ: ಪ್ರಥಮ: ಸಾಜೀಲ್ ಪಾಶಾ, ದಾವಣಗೆರೆ. ದ್ವಿತೀಯ ನಿರ್ಮಲಕುಮಾರ ಧಾರವಾಡ. ತೃತೀಯ: ಉಮೇಶ ಗಂಗಾನೆ ಬೆಳಗಾವಿ. ಚತುರ್ಥ್ ಗಣೇಶ ವರ್ಣೆಕರ, ಹಾವೇರಿ.ಪಂಚಮಬಹುಮನ ಮುತ್ತುರಾಜ ಲಮಾಣಿ. ಧಾರವಾಡ.
೬೫ಕೇಜಿ ವಿಭಾಗ: ಪ್ರಥಮ: ಶೇಖಅಹ್ಮದ ದಾವಣಗೆರೆ. ದ್ವಿತೀಯ ಅಖೀಬ್ ಅಕ್ತರ ಧಾರವಾಡ. ತೃತೀಯ ವಸೀಮ್ ಅಂಬಡಗಿ, ಧಾರವಾಡ. ಚತುರ್ಥ ಪ್ರಕಾಶ ಕಾಳಿ, ಧಾರವಾಡ. ಪಂಚಮ ಬಹುಮಾನ ರೀಯಾಜ ಗೂಕುಲ್, ಧಾರವಾಡ.
೭೦ಕೇಜಿ ವಿಭಾಗ: ಪ್ರಥಮ: ಪ್ರತಾಪ್ ಕಲಕುಂದಿರಿಕರ, ಬೆಳಗಾವಿ. ದ್ವಿತೀಯ: ಸಾಹೇಬ್ ಲಾಲ್, ಧಾರವಾಡ. ತ್ರತೀಯ ಚಂದನಕುಮರ ಧಾರವಾಡ.
ಚತುಥ; ಅಜಾಜ್ಖಾನ್ ಹಾವೇರಿ. ಪಂಚಮ ಬಹುಮನ ರಿಜ್ವಾನ್ ತಹಶೀಲ್ದಾರ ಧಾರವಾಡ.
೭೫ಕೆ.ವಿಭಾಗ: ಪ್ರಥಮ: ಮಹೇಶಗೌಳಿ, ಬೆಳಗಾವಿ, ದ್ವಿತೀಯ ಚೇತನ್ ಮಲ್ಲಾಡ, ಧಾರವಾಡ. ತೃತೀಯ ಹುಸೇನ್ ಸೈಯದ್ ಧಾರವಾಡ. ಚತುರ್ಥ ಅರಣು ಗುಡ್ಡದಕೇರಿ, ಧಾರವಾಡ. ಪಂಚಮ ಬಹುಮಾನ ಸಾದೀಖ ತಡಕೋಡ, ಧಾರವಾಡ.
೮೦ಕೇ.ಜಿ.ವಿಭಾಗ ಪ್ರಥಮ: ತಪಸ್ಸಕುಮರ ನಾಯಕ ಚಿತ್ರದುರ್ಗ, ದ್ವಿತೀಯ ದಯಾನಂದ ನಲಜಕರ, ಬೆಳಗಾವಿ.
೮೫+ ವಿಭಾಗ: ಪ್ರಥಮ ವಿಕಾಸ ಸೂರ್ಯವಂಶಿ, ಬೆಳಗಾವಿ. ದ್ವಿತೀಯ ಪ್ರವೀಣ ಕಲಕುಂದರ, ಬೆಳಗಾವಿ. ತ್ರತೀಯ ಕಾಶಿನಾಥ ನಾಯ್ಕರ್, ಧಾರವಾಡ.