“ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಸಮರ್ಥ ನಿರ್ದೇಶಕ ಡಾ. ಉದಯ್ ಮುಳಗುಂದ ” ಆರೋಪ, ವಜಾಕ್ಕೆ ಆಗ್ರಹ
* ೧೨. ೦೭. ೨೦೨೨ ರಂದು ಹಾವೇರಿ ಕಿಮ್ಸಗೆ ನೇಮಕಗೊಂಡಿರುವ ಡಾ ಉದಯ್ ಮುಳಗುಂದ
*೧೫೦ ವಿದ್ಯಾರ್ಥಿಗಳಿಗೆ ಬೊಧನೆ ಮಾಡಲು ಕೇವಲ ಇಬ್ಬರು ಬೋಧಕರು!
* ಸರ್ಕಾರದ ಸಿ ಮತ್ತು ಆರ್ ನಿಯಮ ಹಾಗೂ ಎಸ್ .ಎಂ. ನ್ ನಿಯಮಗಳ ಅನ್ವಯ ಐದು ವರ್ಷ ಪ್ರಾಧ್ಯಾಪಕರಾಗಿ ಹಾಗೂ ಆಡಳಿತಾತ್ಮಕ ಅನುಭವ ಇರುವವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಬೇಕೆಂಬುದು ಕಡ್ಡಾಯ
* ಡಾ ಉದಯ್ ಮುಳಗುಂದ ರ ಸೇವೆ ೩ ವರ್ಷ ೧ ತಿಂಗಳು
* ಸಾರ್ವಜನಿಕರಿಗೆ ದೊರೆಯದ ಹಾವೇರಿಕಿಮ್ಸ್ನ ಪ್ರಗತಿ ಮಾಹಿತಿ
* ಹಾವೇರಿಕಿಮ್ಸ್ಗೆ ದಕ್ಷ ಹಾಗೂ ಅನುಭವವಿರುವ ನಿರ್ದೇಶಕ ನೇಮಕಕ್ಕೆ ಒತ್ತಡ
ಹಾವೇರಿ: ಹಾವೇರಿಜಿಲ್ಲೆಯ ಜನತೆಯ ಬಹುದಿನದ ಕನಸಾಗಿದ್ದ ನೂತನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸರ್ಕಾರದಿಂದ ನೇಮಕವಾಗಿರುವ ಡಾ ಉದಯ್ ಮುಳಗುಂದ ಅವರಿಗೆ ಆಡಳಿತದಲ್ಲಿ ಅನುಭವ ಇಲ್ಲದ ಕಾರಣಕ್ಕೆ , ಸಮರ್ಪಕವಾಗಿ ಇವರು ಕಾರ್ಯನಿರ್ವಹಿಸಿದ ಕಾರಣಕ್ಕೆ ಹಾವೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೆಳವಣಿಗೆಗೆ ಹಿನ್ನಡೆಯಾಗುತ್ತಿದ್ದು, ಕೂಡಲೆ ಇವರನ್ನು ಸರ್ಕಾರ ಬದಲಾಯಿಸಿ ಸಮರ್ಥರನ್ನು ನಿರ್ದೇಶಕರನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಗಡಿಯ ಸಮಾಜ ಸೇವಕ ಸತೀಶ್ ದತ್ತಪ್ಪ ಮಾಳದಕರ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈಬಗ್ಗೆ ಫೆ.೮ರಂದು ಸಿಎಂ ಅವರಿಗೆ ಪತ್ರ ಬರೆದಿರುವ ಅವರು ಸರ್ಕಾರದ ಅಧೀನ ಕಾರ್ಯದರ್ಶಿ -೨ ವೈದ್ಯಕೀಯ ಶಿಕ್ಷಣ ಇಲಾಖೆ ಬೆಂಗಳೂರು ಇವರು ದಿನಾಂಕ ೧೨. ೦೭. ೨೦೨೨ ರಂದು ಹೊರಡಿಸಿದ ಪ್ರತಿ ಡಾ ಉದಯ್ ಮುಳಗುಂದ ಪ್ರಾಧ್ಯಾಪಕರು ನೇತ್ರಶಾಸ್ತ್ರ ವಿಭಾಗ ಕಿಮ್ಸ ಹುಬ್ಬಳ್ಳಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ನಾಲ್ಕು ವರ್ಷಗಳು ಅವಧಿಯವರೆಗೆ ಅಥವಾ ಸರಕಾರದ ಆದೇಶದವರೆಗೆ ಕೀಮ್ಸ ಹಾವೇರಿ ಪ್ರಥಮ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಮಾಡಿರುತ್ತಾರೆ.
ಆದರೆ ನೂತನ ನಿರ್ದೇಶಕರು ಹಾವೇರಿ ಕೀಮ್ಸ ಬೆಳವಣಿಗೆ ಶ್ರಮಿಸುತ್ತಿಲ್ಲ. ಹಾವೇರಿ ಕೀಮ್ಸನಲ್ಲಿ ಎಂ. ಬಿ. ಬಿ. ಎಸ್. ಪ್ರಥಮ ಬ್ಯಾಚು ೧೫೦ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇವರಿಗೆ ಮೂಲಸೌಲಭ್ಯಗಳನ್ನು ಒದಗಿಸಿಲ್ಲ. ೧೫೦ ವಿದ್ಯಾರ್ಥಿಗಳಿಗೆ ಬೊಧನೆ ಮಾಡಲು ಕೇವಲ ಇಬ್ಬರು ಬೋಧಕರುಮಾತ್ರ ಬರುತ್ತಾರೆ. ಹಾವೇರಿ ಕೀಮ್ಸ ಕಾಲೇಜು ಕಟ್ಟಡ ವಿವಿಧ ವಿಭಾಗಗಳು ಹಾಸ್ಟೆಲ್ಗಳು ತಯಾರಿ ಸ್ಥಿತಿಯಲ್ಲಿಲ್ಲ, ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳಿಲ್ಲದೆ ಉತ್ತಮ ಬೋಧಕ ವೈದ್ಯರು ಇಲ್ಲದೆ ಪಾಠಗಳು ನಡೆಯುತ್ತಿಲ್ಲ. ಇಂಜನಿಯರ ಕಾಲೇಜಿನಲ್ಲಿ ಸದ್ಯ ತರಗತಿಗಳು ನಡೆಯುತ್ತಿದ್ದು, ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ.
ಕಳೆದ ತಿಂಗಳು ಮೈಸೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಲಕ್ಷಾಂತರ ಹಣವನ್ನು ಪೀರೂಪದಲ್ಲಿ ಸರ್ಕಾರಕ್ಕೆ ಭರಿಸಿ
ವೈದ್ಯಕೀಯ ವಿಜ್ಞಾನವನ್ನು ಕಲಿಯಲು ಇಲ್ಲಿಗೆ ಬಂದಿರುವ ವೈದ್ಯ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಕಾಡತೊಡಗಿದೆ.
ಸರ್ಕಾರದ ಸಿ ಮತ್ತು ಆರ್ ನಿಯಮ ಹಾಗೂ ಎಸ್ .ಎಂ. ನ್ ನಿಯಮಗಳ ಅನ್ವಯ ಐದು ವರ್ಷ ಪ್ರಾಧ್ಯಾಪಕರಾಗಿ ಹಾಗೂ ಆಡಳಿತಾತ್ಮಕ ಅನುಭವ ಇರುವವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಬೇಕೆಂಬುದು ಕಡ್ಡಾಯ ಆದರೆ ನಾನು ಮಾಹಿತಿ ಹಕ್ಕು ಪ್ರಾಧಿಕಾರದಿಂದ ಮಾಹಿತಿಯನ್ನು ಪಡೆದಿದ್ದು ಡಾ. ಉದಯ್ ಮುಳುಗುಂದ ಇವರು ದಿನಾಂಕ ೧೩.೬.೨೦೧೯ ರಂದು ಪ್ರಾಧ್ಯಾಪಕರಾಗಿದ್ದು ಐದು ವರ್ಷ ಪೂರ್ಣ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವುದಿಲ್ಲ. ಅಂದರೆ ಕೇವಲ (೩ ವರ್ಷ ೧ ತಿಂಗಳು ಆಗಿರುತ್ತದೆ). ಮತ್ತು ಯಾವುದೇ ಆಡಳಿತಾತ್ಮಕ ಅನುಭವ ಹೊಂದಿಲ್ಲ.
ಹಾವೇರಿ ಕೀಮ್ಸ ನಿರ್ದೇಶಕ ಡಾ. ಉದಯ್ ಮುಳಗುಂದ ಹಾವೇರಿಯಲ್ಲಿ ವಾಸಿಸುತ್ತಿಲ್ಲ. ಹುಬ್ಬಳ್ಳಿಯಲ್ಲಿ , ಇಲ್ಲವೇ ಬೆಂಗಳೂರಿನಲ್ಲಿರುತ್ತಾರೆ. ಬಿಲ್ ಪಾಸ್ ಮಾಡಲು ಮತ್ತು ಚಕ್ ಹರಿಯಲು ಮಾತ್ರ ಹಾವೇರಿಗೆ ಬರುತ್ತಾರೆ. ಇವರ ಜೊತೆ ಹುಬ್ಬಳ್ಳಿಯ ಹಾಗೂ ಕುಂದಾಪುರದ ಕೆಲ ಮಾರಾಟಗಾರರು ಹಾಗೂ ರಾಜಕೀಯ ವ್ಯಕ್ತಿಗಳ ಜೊತೆ ಸದಾಕಾಲ ಇರುತ್ತಾರೆ. ಹಾವೇರಿ ಕೀಮ್ಸ್ ಆಸ್ಪತ್ರೆಯನ್ನು ಉನ್ನತಿಕರಿಸಲು ಇವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಸಾರ್ವಜನಿಕರಿಗೆ ಸಂದರ್ಶನ ಕೊಡುವುದಿಲ್ಲ. ಇದುವರೆಗೂ ಕಾಲೇಜಿನ ಬಗ್ಗೆ ಯಾವುದೇ ಪ್ರಗತಿ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಟ್ಟಿರುವುದಿಲ್ಲ.
ಇವರಿಗೆ ಯಾವುದೇ ಆಡಳಿತಾತ್ಮಕ ಅನುಭವ ಇಲ್ಲದಿರುವುದೇ ಇಂಥ ನಿರ್ಲಕ್ಷಕ್ಕೆ ಮುಖ್ಯಕಾರಣ. ಅನುಭವ ಇಲ್ಲದ ಅರ್ಹತೆ ಇಲ್ಲದ ಅಸಮರ್ಥವಾಗಿರುವ ಹಾಲಿ ನಿರ್ದೇಶಕರಾದ ಡಾ.ಉದಯ್ ಮುಳಗುಂದ ಇವರನ್ನು ವಜಾಮಾಡಿ, ಕೂಡಲೇ ಅನುಭವವಿರುವ ಹಾಗೂ ಸಮರ್ಥ ನಿರ್ದೇಶಕರನ್ನ ನೇಮಿಸಬೇಕು. ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ೧೫೦ ಎಂ. ಬಿ. ಬಿ. ಎಸ್ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆಯ ಹಾವೇರಿಯ ಕೀಮ್ಸ್ ಕಾಲೇಜಿನ ಭವಿಷ್ಯವು ಅತಂತ್ರವಾಗುತ್ತದೆ. ಈಬಗ್ಗೆ ಮುಖ್ಯಂತ್ರಿಗಳು ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಡಾ. ಉದಯ್ ಮುಳುಗುಂದ ಇವರನ್ನು ವಜಾ ಮಾಡಲು ಕಾನೂನಾತ್ಮಕ ಹೋರಾಟ ಮಾಡಬೇಕಾಗುತ್ತದೆ. ಈ ಡಾ. ಉದಯ್ ಮುಳಗುಂದ ನಿರ್ದೇಶಕರಿಗೆ ಅನುಭವ ಇಲ್ಲದ ಹಾಗೂ ಅಸಮರ್ಥರಿರುವ ಕಾರಣಕ್ಕೆ ಅನೇಕ ಅವಘಡಗಳು ನಡೆಯುತ್ತಿವೆ ಇವರನ್ನು ಕೂಡಲೇ ವಜಾಮಾಡಿ ಉತ್ತಮ ಹಾಗೂ ದಕ್ಷ ಹಾಗೂ ಅನುಭವವಿರುವ ನಿರ್ದೇಶಕರನ್ನು ಮರು ನೇಮಕ ಮಾಡಿ ೧೫೦ ಎಂ. ಬಿ. ಬಿ .ಎಸ್. ವಿದ್ಯಾರ್ಥಿಗಳ ಹಾಗೂ ಮುಂದಿನ ಕಾಲೇಜಿನ ಹಾವೇರಿ ಕಿಮ್ಸ ಭವಿಷ್ಯದ ಸಲುವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸತೀಶ ಮಾಳದಕರ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.