ಹಾವೇರಿಜಿಲ್ಲಾ ಪಂಚಾಯತ್ ಸಿಇಓ ಮೊಹಮ್ಮದ್ ರೋಷನ್ ಹೆಸ್ಕಾಂ ಎಂಡಿಯಾಗಿ ವರ್ಗ
ಹಾವೇರಿ; ಹಾವೇರಿಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಹೆಸ್ಕಾಂ ಎಂಡಿಯಾಗಿ ವರ್ಗವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೊಹಮ್ಮದ್ ರೋಷನ್ ಅವರು ಹಾವೇರಿಜಲ್ಲಾ ಪಂಚಾಯತ್ ಸಿಇಓ ಆಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಹೆಸರುವಾಸಿಯಾಗಿದ್ದರು. ಇತ್ತೀಚೆಗೆ ನಡೆದ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನಲ್ಲಿ ಸಿಂಹಪಾಲು ಇವರದ್ದಾಗಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಇವರು ಮಾರ್ಗದರ್ಶನದಲ್ಲಿ ಅಳವಡಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ದೇಶದ ಗಮನ ಸೆಳೆದಿತ್ತು. ಅನೇಕ ದೊಡ್ಡ ದೊಡ್ಡ ಸಮ್ಮೇಳನ ಹಾಗೂ ಕಾರ್ಯಕ್ರಮಗಳಲ್ಲಿ ಮೊಹಮ್ಮದ್ ರೋಷನ್ ಅವರ ಹಾವೇರಿಯ ಮಾದರಿಯನ್ನು ಅಳವಡಿಸಲಾಗಿತ್ತು. ಇದೀಗ ಮೊಹಮ್ಮದ್ ರೋಷನ್ ಅವರನ್ನು ಸರ್ಕಾರ ಹೆಸ್ಕಾಂ ಎಂಡಿಯಾಗಿ ವರ್ಗಮಾಡಿದೆ.