ಅಲೆಮಾರಿ ನಿಗಮಕ್ಕ ೩೦೦ಕೋಟಿರೂ ವಾಪಾಸ ನೀಡಲು ಒತ್ತಾಯ
ಹಾವೇರಿ : ಅಲೆಮಾರಿ ಜನಾಂಗದ ಜನರಿಗೆ ಮನೆ ಕಟ್ಟಿ ಕೊಡಲು ಮೀಸಲಿಟ್ಟ ೩೦೦ ಕೋಟಿ ಅನುದಾನವನ್ನು ಮರಳಿ ಅಲೆಮಾರಿ ನಿಗಮಕ್ಕೆ ನೀಡುವಂತೆ ಒತ್ತಾಯಿಸಿ ಶುಕ್ರವಾರ ಹಾವೇರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಮುದಾಯದವರಿಗೆ ಮನೆ ಕಟ್ಟಲು ೩೦೦ ಕೋಟಿ ರೂಪಾಯಿಗಳನ್ನು ಸರ್ಕಾರ ರಾಜೀವಗಾಂಧಿ ವಸತಿ ನಿಗಮದಿಂದ ವಾಪಾಸ ಪಡೆದಿದ್ದು, ಆ ಹಣವನ್ನು ಮರಳಿ ನೀಡಿ ಅಲೆಮಾರಿ ಜನಾಂಗದವರಿಗೆ ನ್ಯಾಯ ಒದಗಿಸಬೇಕು.
ಅಲೆಮಾರಿ ಸಮುದಾಯದ ಮಕ್ಕಳ ಶೈಕ್ಷಣಿಕ ಅನುಕೂಲವಾಗುವಂತೆ ವಸತಿ ಶಾಲೆಗಳಿಗೆ ಪರೀಕ್ಷೆ ನೀತಿ ವಿನಾಯತಿ ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಬಾದ ಜಿಲ್ಲಾಧ್ಯಕ್ಷ ಶೆಟ್ಟಿ ವಿಬೂತಿ, ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಮುಖಂಡರಾದ ಮಲ್ಲೇಶಪ್ಪ ಕಡಕೋಳ, ಶಿವರಾಜ ಹರಿಜನ, ಮಾರೇಪ್ಪ ವಿಬೂತಿ ಸೇರಿದಂತೆ ಅನೇಕರಿದ್ದರು.
ಅಲೆಮಾರಿ ನಿಗಮಕ್ಕ ೩೦೦ಕೋಟಿರೂ ವಾಪಾಸ ನೀಡಲು ಒತ್ತಾಯ
Date:
ಅಲೆಮಾರಿ ನಿಗಮಕ್ಕ ೩೦೦ಕೋಟಿರೂ ವಾಪಾಸ ನೀಡಲು ಒತ್ತಾಯ
ಹಾವೇರಿ : ಅಲೆಮಾರಿ ಜನಾಂಗದ ಜನರಿಗೆ ಮನೆ ಕಟ್ಟಿ ಕೊಡಲು ಮೀಸಲಿಟ್ಟ ೩೦೦ ಕೋಟಿ ಅನುದಾನವನ್ನು ಮರಳಿ ಅಲೆಮಾರಿ ನಿಗಮಕ್ಕೆ ನೀಡುವಂತೆ ಒತ್ತಾಯಿಸಿ ಶುಕ್ರವಾರ ಹಾವೇರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಮುದಾಯದವರಿಗೆ ಮನೆ ಕಟ್ಟಲು ೩೦೦ ಕೋಟಿ ರೂಪಾಯಿಗಳನ್ನು ಸರ್ಕಾರ ರಾಜೀವಗಾಂಧಿ ವಸತಿ ನಿಗಮದಿಂದ ವಾಪಾಸ ಪಡೆದಿದ್ದು, ಆ ಹಣವನ್ನು ಮರಳಿ ನೀಡಿ ಅಲೆಮಾರಿ ಜನಾಂಗದವರಿಗೆ ನ್ಯಾಯ ಒದಗಿಸಬೇಕು.
ಅಲೆಮಾರಿ ಸಮುದಾಯದ ಮಕ್ಕಳ ಶೈಕ್ಷಣಿಕ ಅನುಕೂಲವಾಗುವಂತೆ ವಸತಿ ಶಾಲೆಗಳಿಗೆ ಪರೀಕ್ಷೆ ನೀತಿ ವಿನಾಯತಿ ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಬಾದ ಜಿಲ್ಲಾಧ್ಯಕ್ಷ ಶೆಟ್ಟಿ ವಿಬೂತಿ, ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಮುಖಂಡರಾದ ಮಲ್ಲೇಶಪ್ಪ ಕಡಕೋಳ, ಶಿವರಾಜ ಹರಿಜನ, ಮಾರೇಪ್ಪ ವಿಬೂತಿ ಸೇರಿದಂತೆ ಅನೇಕರಿದ್ದರು.