“ವನ್ಯಜೀವಿಗಳ ಜೀವವೈವಿಧ್ಯತೆ “ಕಾಡು-ಮೇಡು”ಕೃತಿಯಲ್ಲಿ ಅನಾವರಣ”ಸಾಹಿತಿ ಸತೀಶ ಕುಲಕರ್ಣಿ

Date:

“ವನ್ಯಜೀವಿಗಳ ಜೀವವೈವಿಧ್ಯತೆ “ಕಾಡು-ಮೇಡು”ಕೃತಿಯಲ್ಲಿ ಅನಾವರಣ”ಸಾಹಿತಿ ಸತೀಶ ಕುಲಕರ್ಣಿ
ಹಾವೇರಿ: ಯಾವುದೇ ಬರಹಗಾರರಿಗೆ ಕುತೂಹಲ ಬರವಣಿಗೆ ಹಾಗೂ ಸಾಮಾಜಿಕ ಬದ್ಧತೆ ಇದ್ದರೆ ಮಾತ್ರ ಅಂತವರ ಕೃತಿಗಳು ಮಹತ್ವವನ್ನು ಪಡೆಯುತ್ತವೆ. ಪುಸ್ತಕ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಮಾ. ೧೯ರ ಭಾನುವಾರ ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಶ್ರಮಿಕ ಪ್ರಕಾಶನ ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತ, ಸಾಹಿತಿ, ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ‘ಕಾಡು-ಮೇಡು’ ಪುಸ್ತಕ ಬಿಡುಗಡೆಮಾಡಿ ಮಾತನಾಡಿದ ಅವರು, ನಮ್ಮ ಸುತ್ತ-ಮುತ್ತಲಿರುವ ಪಕ್ಷಿ-ಪ್ರಾಣಿ ಪ್ರಪಂಚದ ಸುಕ್ಷ್ಮತೆಯನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು.
ತಾವು ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ ಹಲವು ಹತ್ತು ವೈವಿಧ್ಯಮಯ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡವ ಸಂದರ್ಭದಲ್ಲಿ ಓದಿದ್ದು, ಅನುವಾದ, ಅಂಕಣ, ಕಥೆ, ಕವನ, ಕಾದಂಬರಿ, ವಿಮರ್ಶೆ ಹೀಗೆ ನಾನಾ ತರಹದ ಪುಸ್ತಕಗಳನ್ನು ಓದಿದ ಸಂದರ್ಭದಲ್ಲಿ ಬರಹದ ನಾನಾ ಮುಖಗಳು, ಪುಸ್ತಕದಲ್ಲಿನ ತಪ್ಪು ಒಪ್ಪುಗಳು ಕಾಣಿಸುತ್ತವೆ. ಮಾಲತೇಶ ಅವರ ‘ಕಾಡು-ಮೇಡು’ ಕೃತಿ ವನ್ಯ ಜೀವಿಗಳ ಹಾಗೂ ಪರಿಸರದ ಬಗೆಗಿನ ಕುತೂಹಲಭರಿತ ವೈವಿಧ್ಯಯ ವಿಷಯಗಳುಅನಾವರಣಗೊಂಡಿವೆ. ವನ್ಯ ಜೀವಿಗಳ ಜೀವವೈವಿಧ್ಯವನ್ನು ತಮ್ಮದೆ ಆದ ವಿಭಿನ ಶೈಲಿಯ ಬರವಣಿಗೆಯ ಮೂಲಕ ದಾಖಲಿಸಿರುವುದು ಉತ್ತಮವಾದ ಕಾರ್ಯವಾಗಿದೆ ‘ಕಾಡು-ಮೇಡು’ ಕೃತಿ ಅಧ್ಯಯನಾಸಕ್ತರಿಗೆ ಉಪಯುಕ್ತ ಮಾರ್ಗದರ್ಶಿ ಕೃತಿಯಾಗಿದೆ ಎಂದರು.
ಸರ್ಕಾರಿ ಎಸ್.ಸಿ. ಎಸ್.ಟಿ. ಪ.ಪೂ ಕಾಲೇಜಿನ ಪ್ರಾ. ಡಾ.ರಮೇಶ ತೆವರಿ ಪುಸ್ತಕ ಪರಿಚಯಿಸುತ್ತಾ ಒಂದು ಚಿತ್ರ ಸಾವಿರ ಪದಗಳಿಗೆ ಸಮ, ಹವ್ಯಾಸಿ ಛಾಯಾಗ್ರಾಹಕರಾಗಿರುವ ಮಾಲತೇಶ ಅಂಗೂರ ಅವರು ಶ್ರಮ, ಸೃಜನ ಶೀಲತೆ, ಚಿತ್ರ ಸಹಿತ ಬರವಣಿಗೆ ಎದ್ದು ಕಾಣುತ್ತದೆ. ವನ್ಯ ಜೀವಿ ಆಸಕ್ತರಿಗೆ, ಅಧ್ಯಯನ ಶೀಲರಿಗೆ ಆಕಾರ ಗ್ರಂಥವಾಗಿಯು ಸಹ ‘ಕಾಡು-ಮೇಡು’ ಕೃತಿ ಮಾರ್ಗದರ್ಶನ ನೀಡಲಿದೆ ಎಂದರು.
ಲೇಖಕ ಮಾಲತೇಶ ಅಂಗೂರ ಮಾತನಾಡಿ, ವನ್ಯಜೀವಿಗಳ ಬಗೆಗಿನ ವಿಷಯ ಆಸಕ್ತಿಕರವಾಗಿದ್ದು, ನಿತ್ಯ ಪರಿಸರ ಒಂದಿಲ್ಲದೊಂದು ಹೊಸ ತನಪಡೆಯತ್ತದೆ. ಪರಿಸರ ನಾಶದಿಂದ ನಮ್ಮ ಸುತ್ತ ಮುತ್ತಲಿದ್ದ ಅನೇಕ ಅಪರೂಪದ ವನ್ಯಜೀವಿಗಳ ಸಂತತಿ ವಿನಾಶದ ಅಂಚಿಗೆ ಬಂದಿದೆ. ಪರಿಸರವನ್ನು ನಾವು ಕಾಪಾಡದಿದ್ದರೆ ಪರಿಸರ ನಮ್ಮ ಮೇಲೆ ಸೇಡು ತೀರಿಸಿಕೊಳ್ಳದೇ ಇರಲಾರದು, ನಮಗೆ ಮನೆ ಇರದಿದ್ದರೆ ಹೇಗೆ ತೊಂದರೆಯಾಗುತ್ತದೆಯೋ ಹಾಗೇ ವನ್ಯ ಜೀವಿಗಳಿಗೆ ಕಾಡು ಇರದಿದ್ದರೆ ಅವು ತೊಂದರೆ ಅನುಭವಿಸುತ್ತವೆ. ಹಸಿರು ಹಸನಾಗಿದ್ದರೆ ನಮ್ಮ ಬದುಕು ಹಸನಾಗುತ್ತದೆ ಎಂದರು.
ನಗರಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಉಧ್ಯಮಿ ಕೆ. ಮಂಜಣ್ಣ ಮಾತನಾಡಿ ಅಂಗೂರ ಅವರದು ಬಹುಮುಖ ಪ್ರತಿಭೆ, ಯಾವುದೇ ದಾಕ್ಷಿಣ್ಯಕ್ಕೆ ಒಳಗಾದವರಲ್ಲ ನೇರ, ನಿಷ್ಟುರ ಬರವಣಿಗೆ, ಅವರ ಆರ್ಥಿಕ ಅಭದ್ರತೆಯ ನಡುವೆಯು ನಾಲ್ಕಾರು ಕೃತಿಗಳನ್ನು ಪ್ರಕಟಿಸುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ಬಿತ್ತಿದ್ದಾರೆ. “ಕಾಡು-ಮೇಡು” ಅಪರೂಪದ ಕೃತಿಯಾಗಿದ್ದು ಓದುಗರು ಈ ಕೃತಿಯನ್ನು ಕೊಳ್ಳುವ ಮೂಲಕ ಅವರ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ನಾಡಿನಲ್ಲಿ ಯಾವುದೇ ಮಹತ್ವವಾದುದನ್ನು ಮೇಲ್ಜಾತಿಗಳು ಕೊಟ್ಟಿರವುದು ವಿರಳ, ಮಹಾಭಾರತದಂತಹ ಒಂದು ಮಹಾ ಕಾವ್ಯ ಹುಟ್ಟಲು ಒಬ್ಬ ವ್ಯಾಸ ಬೇಕಾದ, ರಾಮಾಯಣದಂತಹ ಒಂದು ಮಹಾ ಕಾವ್ಯ ಹುಟ್ಟಲು ಒಬ್ಬ ವಾಲ್ಮೀಕಿ ಬೇಕಾದ. ಜೀವನದಲ್ಲಿ ನೊಂದು ಬೇಂದು ಬೇಂದ್ರೆ ಯಾದಂತೆ, ಅಂಗೂರ ಅವರು ನೊಂದು, ಬೆಂದವರು, ಹಿತ-ಮಿತ ಮಾತುಗಳು ಎಲ್ಲರೋಳಗೊಂದದಾದವರು, ಎಲ್ಲರಿಗೂ ಅವರೆಂದರೆ ಅಚ್ಚುಮೆಚ್ಚು. ಅವರ ‘ಕಾಡು-ಮೇಡು’ ಕೃತಿಯು ಆಕರ್ಶಕ ಜೀವ ಪ್ರೀತಿಯ ಬರವಣಿಗೆ ಮೂಲಕ ಓದುಗರನ್ನು ಹಿಡಿದಿಡತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ ಮಾತನಾಡಿ, ನಾವು ಪ್ರಕೃತಿಯತ್ತ ಮುಖ ಮಾಡಬೇಕಿದೆ ಪಕ್ಷಿ- ಪ್ರಾಣಿಗಳನ್ನು ಪ್ರೀತಿಯಿಂದ ನೋಡುವುದು ಇಂದು ಅತ್ಯಗತ್ಯವಾಗಿದೆ. ಪ್ರಾಣಿ-ಪಕ್ಷಿಗಳಿಂದ ನಾವು ಪಾಠ ಕಲಿಯಬೇಕಾದ್ದು ಬಹಳ ಇದೆ. ಪುಸ್ತಕ ಪ್ರಕಟಿಸುವುದೆಂದರೆ ಪ್ರಸವ ವೇದನೆ, ಇಂತಹ ಪರಿಸ್ಥಿತಿಯಲ್ಲಿ ಅಂಗೂರ ಅವರ ನಾಲ್ಕನೆ ಕೃತಿ ಲೋಕಾರ್ಪಣೆ ಸಾಹಸವೇ ಸರಿ ಎಂದರು.
ಸಾನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ ಮಾತನಾಡಿ, ಪ್ರಾಣಿ ಪಕ್ಷಿಗಳನ್ನು ಹತ್ತಿರದಲ್ಲಿ ನೋಡಿ ಅವುಗಳ ಅಧ್ಯಯನ ಮಾಡುವದು ಸುಲಭವಾದ ಕೆಲಸವಲ್ಲ. ಅವುಗಳ ಪ್ರಭೇದ, ಜೀವನವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು.
ಓದುಗ ಸಂಜಯಗಾಂದಿ ಸಂಜೀವಣ್ಣನವರ ಮಾತನಾಡಿ ನಮ್ಮ ಸುತ್ತ-ಮುತ್ತ ಅಪರೂಪದಲ್ಲಿ ಅಪರೂಪವಾದ ಜೀವಿಗಳು ಇರುವುದು ನಮಗೆ ಗೊತ್ತಿಲ. ಹಾವೇರಿಯ ಪರಿಸರದಲ್ಲಿ ನೀರುನಾಯಿ, ಕೆಂದಳಿಲು, ಕರಡಿ, ಚಿರತೆ ಹೀಗೆ ಅನೇಕ ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಅವುಗಳ ವಿವರಣೆಯನ್ನು ಓದುಗರಿಗೆ ನೀಡುವ ಮೂಲಕ ದಿ. ಸಲೀಂಅಲಿ, ಪೂರ್ಣಚಂದ್ರ ತೇಜಸ್ವಿ ಅವರ ಪರಂಪರೆಯನ್ನು ಅಂಗೂರ ಅವರು ಮುಂದುವರೆಸಿರುವುದ ದಾಖಲಾರ್ಹ ಸಂಗತಿ ಎಂದು ಶ್ಲಾಘಿಸಿದರು.
ತಾಲೂಕಾ ಕ.ಸಾ.ಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ವೇದಿಕೆಯಲ್ಲಿದ್ದರು, ಹನುಮಂತಸಿಂಗ್ ರಜಪುತ ಪ್ರಾರ್ಥಿಸಿದರು, ಪ್ರವೀಣ ಪೂಜಾರ ಸ್ವಾಗತಿಸಿದರು, ಎಸ್.ಆರ್. ಹಿರೇಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಮೌನೇಶ ಬಡಿಗೇರ ನಿರೂಪಿಸಿದರು, ವೀರೇಶ ಹ್ಯಾಡ್ಲ ವಂದಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

“ವನ್ಯಜೀವಿಗಳ ಜೀವವೈವಿಧ್ಯತೆ “ಕಾಡು-ಮೇಡು”ಕೃತಿಯಲ್ಲಿ ಅನಾವರಣ”ಸಾಹಿತಿ ಸತೀಶ ಕುಲಕರ್ಣಿ
ಹಾವೇರಿ: ಯಾವುದೇ ಬರಹಗಾರರಿಗೆ ಕುತೂಹಲ ಬರವಣಿಗೆ ಹಾಗೂ ಸಾಮಾಜಿಕ ಬದ್ಧತೆ ಇದ್ದರೆ ಮಾತ್ರ ಅಂತವರ ಕೃತಿಗಳು ಮಹತ್ವವನ್ನು ಪಡೆಯುತ್ತವೆ. ಪುಸ್ತಕ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಮಾ. ೧೯ರ ಭಾನುವಾರ ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಶ್ರಮಿಕ ಪ್ರಕಾಶನ ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತ, ಸಾಹಿತಿ, ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ‘ಕಾಡು-ಮೇಡು’ ಪುಸ್ತಕ ಬಿಡುಗಡೆಮಾಡಿ ಮಾತನಾಡಿದ ಅವರು, ನಮ್ಮ ಸುತ್ತ-ಮುತ್ತಲಿರುವ ಪಕ್ಷಿ-ಪ್ರಾಣಿ ಪ್ರಪಂಚದ ಸುಕ್ಷ್ಮತೆಯನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು.
ತಾವು ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ ಹಲವು ಹತ್ತು ವೈವಿಧ್ಯಮಯ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡವ ಸಂದರ್ಭದಲ್ಲಿ ಓದಿದ್ದು, ಅನುವಾದ, ಅಂಕಣ, ಕಥೆ, ಕವನ, ಕಾದಂಬರಿ, ವಿಮರ್ಶೆ ಹೀಗೆ ನಾನಾ ತರಹದ ಪುಸ್ತಕಗಳನ್ನು ಓದಿದ ಸಂದರ್ಭದಲ್ಲಿ ಬರಹದ ನಾನಾ ಮುಖಗಳು, ಪುಸ್ತಕದಲ್ಲಿನ ತಪ್ಪು ಒಪ್ಪುಗಳು ಕಾಣಿಸುತ್ತವೆ. ಮಾಲತೇಶ ಅವರ ‘ಕಾಡು-ಮೇಡು’ ಕೃತಿ ವನ್ಯ ಜೀವಿಗಳ ಹಾಗೂ ಪರಿಸರದ ಬಗೆಗಿನ ಕುತೂಹಲಭರಿತ ವೈವಿಧ್ಯಯ ವಿಷಯಗಳುಅನಾವರಣಗೊಂಡಿವೆ. ವನ್ಯ ಜೀವಿಗಳ ಜೀವವೈವಿಧ್ಯವನ್ನು ತಮ್ಮದೆ ಆದ ವಿಭಿನ ಶೈಲಿಯ ಬರವಣಿಗೆಯ ಮೂಲಕ ದಾಖಲಿಸಿರುವುದು ಉತ್ತಮವಾದ ಕಾರ್ಯವಾಗಿದೆ ‘ಕಾಡು-ಮೇಡು’ ಕೃತಿ ಅಧ್ಯಯನಾಸಕ್ತರಿಗೆ ಉಪಯುಕ್ತ ಮಾರ್ಗದರ್ಶಿ ಕೃತಿಯಾಗಿದೆ ಎಂದರು.
ಸರ್ಕಾರಿ ಎಸ್.ಸಿ. ಎಸ್.ಟಿ. ಪ.ಪೂ ಕಾಲೇಜಿನ ಪ್ರಾ. ಡಾ.ರಮೇಶ ತೆವರಿ ಪುಸ್ತಕ ಪರಿಚಯಿಸುತ್ತಾ ಒಂದು ಚಿತ್ರ ಸಾವಿರ ಪದಗಳಿಗೆ ಸಮ, ಹವ್ಯಾಸಿ ಛಾಯಾಗ್ರಾಹಕರಾಗಿರುವ ಮಾಲತೇಶ ಅಂಗೂರ ಅವರು ಶ್ರಮ, ಸೃಜನ ಶೀಲತೆ, ಚಿತ್ರ ಸಹಿತ ಬರವಣಿಗೆ ಎದ್ದು ಕಾಣುತ್ತದೆ. ವನ್ಯ ಜೀವಿ ಆಸಕ್ತರಿಗೆ, ಅಧ್ಯಯನ ಶೀಲರಿಗೆ ಆಕಾರ ಗ್ರಂಥವಾಗಿಯು ಸಹ ‘ಕಾಡು-ಮೇಡು’ ಕೃತಿ ಮಾರ್ಗದರ್ಶನ ನೀಡಲಿದೆ ಎಂದರು.
ಲೇಖಕ ಮಾಲತೇಶ ಅಂಗೂರ ಮಾತನಾಡಿ, ವನ್ಯಜೀವಿಗಳ ಬಗೆಗಿನ ವಿಷಯ ಆಸಕ್ತಿಕರವಾಗಿದ್ದು, ನಿತ್ಯ ಪರಿಸರ ಒಂದಿಲ್ಲದೊಂದು ಹೊಸ ತನಪಡೆಯತ್ತದೆ. ಪರಿಸರ ನಾಶದಿಂದ ನಮ್ಮ ಸುತ್ತ ಮುತ್ತಲಿದ್ದ ಅನೇಕ ಅಪರೂಪದ ವನ್ಯಜೀವಿಗಳ ಸಂತತಿ ವಿನಾಶದ ಅಂಚಿಗೆ ಬಂದಿದೆ. ಪರಿಸರವನ್ನು ನಾವು ಕಾಪಾಡದಿದ್ದರೆ ಪರಿಸರ ನಮ್ಮ ಮೇಲೆ ಸೇಡು ತೀರಿಸಿಕೊಳ್ಳದೇ ಇರಲಾರದು, ನಮಗೆ ಮನೆ ಇರದಿದ್ದರೆ ಹೇಗೆ ತೊಂದರೆಯಾಗುತ್ತದೆಯೋ ಹಾಗೇ ವನ್ಯ ಜೀವಿಗಳಿಗೆ ಕಾಡು ಇರದಿದ್ದರೆ ಅವು ತೊಂದರೆ ಅನುಭವಿಸುತ್ತವೆ. ಹಸಿರು ಹಸನಾಗಿದ್ದರೆ ನಮ್ಮ ಬದುಕು ಹಸನಾಗುತ್ತದೆ ಎಂದರು.
ನಗರಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಉಧ್ಯಮಿ ಕೆ. ಮಂಜಣ್ಣ ಮಾತನಾಡಿ ಅಂಗೂರ ಅವರದು ಬಹುಮುಖ ಪ್ರತಿಭೆ, ಯಾವುದೇ ದಾಕ್ಷಿಣ್ಯಕ್ಕೆ ಒಳಗಾದವರಲ್ಲ ನೇರ, ನಿಷ್ಟುರ ಬರವಣಿಗೆ, ಅವರ ಆರ್ಥಿಕ ಅಭದ್ರತೆಯ ನಡುವೆಯು ನಾಲ್ಕಾರು ಕೃತಿಗಳನ್ನು ಪ್ರಕಟಿಸುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ಬಿತ್ತಿದ್ದಾರೆ. “ಕಾಡು-ಮೇಡು” ಅಪರೂಪದ ಕೃತಿಯಾಗಿದ್ದು ಓದುಗರು ಈ ಕೃತಿಯನ್ನು ಕೊಳ್ಳುವ ಮೂಲಕ ಅವರ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ನಾಡಿನಲ್ಲಿ ಯಾವುದೇ ಮಹತ್ವವಾದುದನ್ನು ಮೇಲ್ಜಾತಿಗಳು ಕೊಟ್ಟಿರವುದು ವಿರಳ, ಮಹಾಭಾರತದಂತಹ ಒಂದು ಮಹಾ ಕಾವ್ಯ ಹುಟ್ಟಲು ಒಬ್ಬ ವ್ಯಾಸ ಬೇಕಾದ, ರಾಮಾಯಣದಂತಹ ಒಂದು ಮಹಾ ಕಾವ್ಯ ಹುಟ್ಟಲು ಒಬ್ಬ ವಾಲ್ಮೀಕಿ ಬೇಕಾದ. ಜೀವನದಲ್ಲಿ ನೊಂದು ಬೇಂದು ಬೇಂದ್ರೆ ಯಾದಂತೆ, ಅಂಗೂರ ಅವರು ನೊಂದು, ಬೆಂದವರು, ಹಿತ-ಮಿತ ಮಾತುಗಳು ಎಲ್ಲರೋಳಗೊಂದದಾದವರು, ಎಲ್ಲರಿಗೂ ಅವರೆಂದರೆ ಅಚ್ಚುಮೆಚ್ಚು. ಅವರ ‘ಕಾಡು-ಮೇಡು’ ಕೃತಿಯು ಆಕರ್ಶಕ ಜೀವ ಪ್ರೀತಿಯ ಬರವಣಿಗೆ ಮೂಲಕ ಓದುಗರನ್ನು ಹಿಡಿದಿಡತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ ಮಾತನಾಡಿ, ನಾವು ಪ್ರಕೃತಿಯತ್ತ ಮುಖ ಮಾಡಬೇಕಿದೆ ಪಕ್ಷಿ- ಪ್ರಾಣಿಗಳನ್ನು ಪ್ರೀತಿಯಿಂದ ನೋಡುವುದು ಇಂದು ಅತ್ಯಗತ್ಯವಾಗಿದೆ. ಪ್ರಾಣಿ-ಪಕ್ಷಿಗಳಿಂದ ನಾವು ಪಾಠ ಕಲಿಯಬೇಕಾದ್ದು ಬಹಳ ಇದೆ. ಪುಸ್ತಕ ಪ್ರಕಟಿಸುವುದೆಂದರೆ ಪ್ರಸವ ವೇದನೆ, ಇಂತಹ ಪರಿಸ್ಥಿತಿಯಲ್ಲಿ ಅಂಗೂರ ಅವರ ನಾಲ್ಕನೆ ಕೃತಿ ಲೋಕಾರ್ಪಣೆ ಸಾಹಸವೇ ಸರಿ ಎಂದರು.
ಸಾನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ ಮಾತನಾಡಿ, ಪ್ರಾಣಿ ಪಕ್ಷಿಗಳನ್ನು ಹತ್ತಿರದಲ್ಲಿ ನೋಡಿ ಅವುಗಳ ಅಧ್ಯಯನ ಮಾಡುವದು ಸುಲಭವಾದ ಕೆಲಸವಲ್ಲ. ಅವುಗಳ ಪ್ರಭೇದ, ಜೀವನವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು.
ಓದುಗ ಸಂಜಯಗಾಂದಿ ಸಂಜೀವಣ್ಣನವರ ಮಾತನಾಡಿ ನಮ್ಮ ಸುತ್ತ-ಮುತ್ತ ಅಪರೂಪದಲ್ಲಿ ಅಪರೂಪವಾದ ಜೀವಿಗಳು ಇರುವುದು ನಮಗೆ ಗೊತ್ತಿಲ. ಹಾವೇರಿಯ ಪರಿಸರದಲ್ಲಿ ನೀರುನಾಯಿ, ಕೆಂದಳಿಲು, ಕರಡಿ, ಚಿರತೆ ಹೀಗೆ ಅನೇಕ ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಅವುಗಳ ವಿವರಣೆಯನ್ನು ಓದುಗರಿಗೆ ನೀಡುವ ಮೂಲಕ ದಿ. ಸಲೀಂಅಲಿ, ಪೂರ್ಣಚಂದ್ರ ತೇಜಸ್ವಿ ಅವರ ಪರಂಪರೆಯನ್ನು ಅಂಗೂರ ಅವರು ಮುಂದುವರೆಸಿರುವುದ ದಾಖಲಾರ್ಹ ಸಂಗತಿ ಎಂದು ಶ್ಲಾಘಿಸಿದರು.
ತಾಲೂಕಾ ಕ.ಸಾ.ಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ವೇದಿಕೆಯಲ್ಲಿದ್ದರು, ಹನುಮಂತಸಿಂಗ್ ರಜಪುತ ಪ್ರಾರ್ಥಿಸಿದರು, ಪ್ರವೀಣ ಪೂಜಾರ ಸ್ವಾಗತಿಸಿದರು, ಎಸ್.ಆರ್. ಹಿರೇಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಮೌನೇಶ ಬಡಿಗೇರ ನಿರೂಪಿಸಿದರು, ವೀರೇಶ ಹ್ಯಾಡ್ಲ ವಂದಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...