ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಹಾವೇರಿ ಜಿಲ್ಲಾ ಅಧ್ಯಕ್ಷರಾಗಿ ನಾಗರಾಜ ಬಡಮ್ಮನವರ ನೇಮಕ
ಹಾವೇರಿ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಹಾವೇರಿ ಜಿಲ್ಲಾಅಧ್ಯಕ್ಷರನ್ನಾಗಿ ಹಾವೇರಿಯ ವಾಲ್ಮೀಕಿ ಸಮಾಜದ ಮುಖಂಡ ನಾಗರಾಜ ಬಡಮ್ಮನವರನ್ನು ನೇಮಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಡಾ,ಟಿ.ಆರ್.ತುಳಸಿರಾಮ್ ಆದೇಶ ಹೊರಡಿಸಿದ್ದಾರೆ. ನೇಮಕಾತಿ ಆದೇಶಪತ್ರವನ್ನು ಶುಕ್ರವಾರ ನಡೆದ ಸಮಾರಂಭದಲ್ಲಿ ವಾಲ್ಮೀಕಿ ಪ್ರಸನ್ನಾನಂದಸ್ವಾಮಿಜಿ, ವಾಲ್ಮೀಕಿ ಕುಮಾರಸ್ವಾಮಿಜಿ, ರಾಜ್ಯಾಧ್ಯಕ್ಷ ಡಾ.ಟಿ.ಆರ್.ತುಳಸಿರಾಮ್ ನಾಗರಾಜ ಬಡಮ್ಮನವರಿಗೆ ನೀಡಿದರು.
ಈ ವೇಳೆ ಮಾತನಾಡಿದ ಡಾ.ಟಿ.ಆರ್.ತುಳಸಿರಾಮ್ ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ರಾಜ್ಯ ಮುಖಂಡರನ್ನು ಹಾಗೂ ಜಿಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾವೇರಿ ಜಿಲ್ಲೆಯಲ್ಲಿ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕು. ವಾಲ್ಮೀಕಿ ನಾಯಕ ಸಮುದಾಯದ ಸಂಘಟನೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯುವ ಘಟಕದ ಸಬಲೀಕರಣ, ಸಂಘಟನೆ, ಬಲವರ್ದನೆ ಕಾರ್ಯದಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ರಾಜ್ಯಮುಖಂಡ ಜಿ.ಟಿ.ಚಂದ್ರಶೇಖರಠಿಜಿಠಿ,
ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಅಧ್ಯಕ್ಷ ರಮೇಶ ಆನವಟ್ಟಿ, ವೀರೇಂದ್ರಸಿಂಹ್
ಹರ್ತಿಕೋಟಿ, ಯುವ ಮುಖಂಡರುಗಳಾದ ಮಾಹಾಂತೇಶ ಹೊಳಿಯಮ್ಮನವರ, ಮಾಲತೇಶ ರಿತ್ತಿ, ಮಲ್ಲಿಕಾರ್ಜುನ ಬೂದಗಟ್ಟಿ, ಹೊನ್ನಪ್ಪ ಗೋಣೆಮ್ಮನವರ ಮತ್ತಿತರರ ಹಾಜರಿದ್ದರು.