ವಿಧಾನಸಭಾ ಚುನಾವಣೆ: ನಾಲ್ಕನೇ ದಿನ ೨೭ ಅಭ್ಯರ್ಥಿಗಳಿಂದ ೩೪ ನಾಮಪತ್ರ ಸಲ್ಲಿಕೆ
ಹಾವೇರಿ. : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಲ್ಕನೇ ದಿನವಾದ ಏಪ್ರಿಲ್ ೧೮ರ ಮಂಗಳವಾರ ದಿನ ಜಿಲ್ಲೆಯ ಆರು ಕ್ಷೇತ್ರಗಳಿಂದ ೨೭ ಅಭ್ಯರ್ಥಿಗಳಿಂದ ೩೪ ನಾಮಪತ್ರಗಳು ಸಲ್ಲಿಕೆಯಾಗಿವೆ.
ಹಾವೇರಿ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳು ಮೂರು ನಾಮಪತ್ರ, ಬ್ಯಾಡಗಿ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳಿಂದ ಎರಡು ನಾಮಪತ್ರ, ಶಿಗ್ಗಾಂವ ಕ್ಷೇತ್ರದಿಂದ ಆರು ಅಭ್ಯರ್ಥಿಗಳಿಂದ ಆರು ನಾಮಪತ್ರ, ರಾಣೇಬೆನ್ನೂರು ಕ್ಷೇತ್ರದಿಂದ ಆರು ಅಭ್ಯರ್ಥಿಗಳಿಂದ ಎಂಟು ನಾಮಪತ್ರ, ಹಾನಗಲ್ ಕ್ಷೇತ್ರದಿಂದ ಐದು ಅಭ್ಯರ್ಥಿಗಳಿಂದ ಎಂಟು ನಾಮಪತ್ರಗಳು ಹಾಗೂ ಹಿರೇಕೆರೂರು ಕ್ಷೇತ್ರದಿಂದ ಐದು ಅಭ್ಯರ್ಥಿಗಳಿಂದ ಏಳು ನಾಮಪತ್ರ ಸಲ್ಲಿಕೆಯಾಗಿವೆ.
ಹಾನಗಲ್ ಕ್ಷೇತ್ರದಿಂದ ಜನತಾದಳ(ಜ್ಯಾತೀತ) ಪಕ್ಷದಿಂದ ಮನೋಹರ ತಹಶೀಲ್ದಾರ (ಮೂರು ನಾಮಪತ್ರ), ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಎಸ್.ಕೆ.ಪಂಪಾಪತಿ(ಎರಡು ನಾಮಪತ್ರ), ಪಕ್ಷೇತರ ಅಭ್ಯರ್ಥಿಯಾಗಿ ಶಿದ್ದಪ್ಪ ಪೂಜಾರ(ಒಂದು ನಾಮಪತ್ರ), ಎಸ್.ಪಿ.ಸುಮಾ(ಒಂದು ನಾಮಪತ್ರ), ಮಲ್ಲಿಕಾರ್ಜುನ ಹಾವೇರಿ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಶಿಗ್ಗಾಂವ ಕ್ಷೇತ್ರದಿಂದ ಜನತಾದಳ(ಜ್ಯಾತ್ಯಾತೀತ) ಮಹಬೂಬಖಾನ್ ಹಕನಾಖಾನ್ ಪಠಾಣ(ಒಂದು ನಾಮಪತ್ರ), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಶಂಭುಲಿಂಗ ಹುಕ್ಕೇರಿ( ಒಂದು ನಾಮಪತ್ರ), ಪಕ್ಷೇತರರಾಗಿ ವಿರುಪಾಕ್ಷಪ್ಪ ಫಕ್ಕೀರಗೌಡ(ಒಂದು ನಾಮಪತ್ರ), ಷಣ್ಮುಖ ಸತ್ಯಪ್ಪ ಶಿವಳ್ಳಿ(ಒಂದು ನಾಮಪತ್ರ), ಶ್ರೀಕಾಂತಗೌಡ ಪೊಲೀಸ್ಗೌಡ್ರ(ಒಂದು ನಾಮಪತ್ರ), ಕುಮಾರಗೌಡ ನಿಂಗನಗೌಡ ಹುತ್ತನಗೌಡ್ರ(ಒಂದು ನಾಮಪತ್ರ), ನಾಮಪತ್ರ ಸಲ್ಲಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ ಜನತಾದಳ(ಜ್ಯಾತೀತ) ಪಕ್ಷದಿಂದ ದುರಗೇಶ ಮೇಗಳಮನಿ (ಒಂದು ನಾಮಪತ್ರ), ಪಕ್ಷೇತರ ಅಭ್ಯರ್ಥಿಯಾಗಿ ಶಿವಕುಮಾರ ಪುಟ್ಟಪ್ಪ ತಾವರಗಿ ( ಒಂದು ನಾಮಪತ್ರ ), ಅಣ್ಣಪ್ಪ ಹಂಚಿನಮನಿ ( ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಬ್ಯಾಡಗಿ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಲೋಹಿತ ನಾಮದೇವ (ಒಂದು ನಾಮಪತ್ರ), ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿಶ್ವನಾಥರೆಡ್ಡಿ ರಡೇರ(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಹಿರೇಕೆರೂರು ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಬಸನಗೌಡ ಪಾಟೀಲ(ಬಿ.ಸಿ. ಪಾಟೀಲ) (ಎರಡು ನಾಮಪತ್ರ) ಹಾಗೂ ಸೃಷ್ಟಿ ಪಾಟೀಲ (ಒಂದು ನಾಮಪತ್ರ), ಜನತದಾಳ (ಜ್ಯಾತ್ಯಾತೀತ) ಪಕ್ಷದಿಂದ ಜಯಾನಂದ ಜಾವಣ್ಣನವರ(ಎರಡು ನಾಮಪತ್ರ), ಕರ್ನಾಟಕ ಜನತಾ ಪಕ್ಷದಿಂದ ಹರೀಶ ಇಂಗಳಗೊಂದಿ(ಒಂದು ನಾಮಪತ್ರ), ಪಕ್ಷೇತರ ಅಭ್ಯರ್ಥಿಯಾಗಿ ರವಿ ಓಲೇಕಾರ( ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ರಾಣೇಬೆನ್ನೂರು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಪ್ರಕಾಶ ಕೋಳಿವಾಡ (ಎರಡುನಾಮಪತ್ರ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಿಂದ ಆರ್.ಶಂಕರ( ಒಂದು ನಾಮಪತ್ರ), ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸಂತೋಷಕುಮಾರ ಕ್ಯಾತಪ್ಪನವರ(ಒಂದು ನಾಮಪತ್ರ), ಜನತಾದಳ (ಜ್ಯಾತೀತ) ಪಕ್ಷದಿಂದ ಮಂಜುನಾಥ ಶಂಕ್ರಪ್ಪ ಗೌಡಶಿವಣ್ಣನವರ(ಎರಡು ನಾಮಪತ್ರ) ಹಾಗೂ ಶಶಿಕಲಾ ಗೌಡಶಿವಣ್ಣನವರ(ಒಂದು ನಾಮಪತ್ರ), ಸ್ವಯಂ ಕೃಷಿ ಪಾರ್ಟಿಯಿಂದ ಮಂಜುನಾಥ ಎನ್(ಒಂದು ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಈವರೆಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ೫೦ ಅಭ್ಯರ್ಥಿಗಳಿಂದ ೭೬ ನಾಮಪತ್ರಗಳು ಸಲ್ಲಿಕೆಯಾಗಿವೆ. ಏಪ್ರಿಲ್ ೧೯ ರಂದು ನಾಮಪತ್ರ ಸಲ್ಲಿಕೆ ಮುಂದುವರೆಯಲಿದೆ. ಏಪ್ರಿಲ್ ೨೦ ನಾಮಪತ್ರ ಸಲಿಕೆಗೆ ಕೊನೆಯ ದಿನವಾಗಿದೆ.