ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳ ಅಂತಿಮ ಕಣದಲ್ಲಿ ೬೦ ಅಭ್ಯರ್ಥಿಗಳು
ಹಾವೇರಿ. : ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಏಪ್ರಿಲ್ ೨೪ ರಂದು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಿಂದ ೨೪ ಅಭ್ಯರ್ಥಿಗಳು ನಾಮಪತ್ರ ಪತ್ರ ಹಿಂಪಡೆದಿದ್ದಾರೆ, ಅಂತಿಮ ಕಣದಲ್ಲಿ ೬೦ ಅಭ್ಯರ್ಥಿಗಳು ಉಳಿದಿದ್ದಾರೆ.
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಅಂತಿಮ ಕಣದಲ್ಲಿ ೧೨ ಅಭ್ಯರ್ಥಿಗಳು ಉಳಿದಿದ್ದಾರೆ. ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ೧೦ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಅಂತಿಮ ಕಣದಲ್ಲಿ ೧೦ ಅಭ್ಯರ್ಥಿಗಳು ಉಳಿದಿದ್ದಾರೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಏಳು ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯು ನಾಮಪತ್ರ ಹಿಂಪಡೆದಿರುವುದಿಲ್ಲ, ಏಳು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಅಂತಿಮ ಕಣದಲ್ಲಿ ೧೪ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಕ್ಷೇತ್ರವಾರು ವಿವರ:
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ೧)ಮನೋಹರ ತಹಶೀಲ್ದಾರ(ಜೆಡಿಎಸ್), ೨)ಶಿವರಾಜ ಸಜ್ಜನರ(ಬಿಜೆಪಿ), ೩)ಶ್ರೀನಿವಾಸ ಮಾನೆ(ಕಾಂಗ್ರೆಸ್), ೪)ಸಾಯಿಕುಮಾರ(ಎಎಪಿ), ೫)ಉಡಚಪ್ಪ ಉದ್ದನಕಾಲ(ಕೆಆರ್ಎಸ್), ೬)ಎಸ್.ಕೆ.ಪಂಪಾಪತಿ (ಕೆಆರ್ಪಿಪಿ), ೭)ಮಂಜುನಾಥ್ ಭೋವಿ(ಐಎಂಪಿ), ೮)ಸುಬ್ರಹ್ಮಣ್ಯ ಹೆಬ್ಬಾರ(ಹಿಂದೂಸ್ತಾನ ಜನತಾಪಾರ್ಟಿ), ೯)ಮಲ್ಲಿಕಾರ್ಜುನ ಹಾವೇರಿ(ಪಕ್ಷೇತರ), ೧೦)ಶಿದ್ದಪ್ಪ ಪೂಜಾರ(ಪಕ್ಷೇತರ),೧೧) ಶ್ರೀನಿವಾಸ ಸಂಕಪಾಳೇ(ಪಕ್ಷೇತರ), ೧೨) ಹೊನ್ನಪ್ಪ ಅಕ್ಕಿವಳ್ಳಿ(ಪಕ್ಷೇತರ).
ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ೧)ಬಸವರಾಜ ಬೊಮ್ಮಾಯಿ(ಬಿಜೆಪಿ), ೨)ಮೆಬೂಬಸಾಬ ಕಾಲೇಬಾಗ(ಆಮ್ ಆದ್ಮಿ ಪಕ್ಷ), ೩)ಯಾಸೀರ ಅಹ್ಮದಖಾನ್ ಪಠಾಣ(ಕಾಂಗ್ರೆಸ್), ೪)ಶಶಿಧರ ಯಲಿಗಾರ (ಜೆಡಿಎಸ್(ಜಾ)), ೫)ಖಾಜಾಮೋದಿನ ಗುಡಗೇರಿ(ಐಎಂಪಿ), ೬)ಶಂಭುಲಿಂಗ ಹುಕ್ಕೇರಿ (ಕೆಆರ್ಎಸ್), ೭)ಜಗದೀಶ ಬಂಕಾಪುರ(ಪಕ್ಷೇತರ), ೮)ಮಂಜಕ್ಕ ಪೂಜಾರ(ಪಕ್ಷೇತರ), ೯)ವಿರೂಪಾಕ್ಷಗೌಡ ಫಕ್ಕೀರಗೌಡ್ರ(ಪಕ್ಷೇತರ), ೧೦) ಡಾ.ಯು.ಪಿ.ಶಿವಾನಂದ (ಪಕ್ಷೇತರ),
ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ೧)ಗವಿಸಿದ್ದಪ್ಪ ದ್ಯಾಮಣ್ಣನವರ(ಬಿಜೆಪಿ), ೨)ತುಕಾರಾಮಪ್ಪ ಹನುಮಂತಪ್ಪ ಮಾಳಗಿ(ಜೆಡಿಎಸ್(ಜಾ)), ೩)ರುದ್ರಪ್ಪ ಲಮಾಣಿ(ಕಾಂಗ್ರೆಸ್), ೪)ಸುಜಾತಾ ಪಿ ಚವ್ಹಾಣ(ಎಎಪಿ), ೫)ಅಣ್ಣಪ್ಪ ಹಂಚಿನಮನಿ(ಸ್ವಯಂ ಕೃಷಿ ಪಕ್ಷ), ೬)ಚಂದನರಾಣಿ ದೊಡ್ಡಮನಿ(ಕೆಆರ್ಪಿಪಿ), ೭)ಫಕ್ಕೀರವ್ವ ಗುಡ್ಡಪ್ಪ ಹರಿಜನ(ಕೆ.ಆರ್.ಎಸ್.ಪಿ), ೮)ದುರಗೇಶ ಮೇಗಳಮನಿ(ಪಕ್ಷೇತರ), ೯)ಪ್ರದೀಪ ರಾಮಣ್ಣ ಮಳಗಾವಿ(ಪಕ್ಷೇತರ), ೧೦)ರಾಜೇಂದ್ರ ಹಿರೇಮಠ(ಪಕ್ಷೇತರ).
ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ೧)ಬಸವರಾಜ ಶಿವಣ್ಣನವರ(ಕಾಂಗ್ರೆಸ್), ೨)ಎಂ.ಎನ್.ನಾಯಕ(ಎಎಪಿ), ೩)ವಿರುಪಾಕ್ಷಪ್ಪ ಬಳ್ಳಾರಿ(ಬಿಜೆಪಿ), ೪)ಸುನಿತಾ ಎಂ.ಪೂಜಾರ(ಜನತಾದಳ(ಜಾ), ೫)ಲೋಹಿತ ನಾಮದೇವ(ಉತ್ತಮ ಪ್ರಜಾಕೀಯ ಪಾರ್ಟಿ), ೬)ವಿಶ್ವನಾಥರೆಡ್ಡಿ ಧ.ರಡ್ಡೇರ(ಕೆ.ಆರ್.ಪಿ), ೭) ಸೈಯದ್ಫಾಹೀಮ ಗುಡಗೇರಿ(ಐಎಂಪಿ).
ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ೧)ಉಜಣೇಶ್ವರ ಬಸವಣ್ಣೆಪ್ಪ ಬಣಕಾರ (ಕಾಂಗ್ರೇಸ್), ೨)ಜಯಾನಂದ ಜಾವಣ್ಣನವರ(ಜನತಾದಳ (ಜಾತ್ಯಾತೀತ)) ೩)ಬಸವನಗೌಡ ಪಾಟೀಲ(ಬಿಜೆಪಿ), ೪)ರಾಜಶೇಖರ ದೂದಿಹಳ್ಳಿ(ಎಎಪಿ), ಕೊಡೆಪ್ಪ ಸಂಗಣ್ಣನವರ(ಕೆಆರ್ಎಸ್), ಹರೀಶ ಇಂಗಳಗೊಂದಿ(ಕೆಜೆಪಿ) ಹಾಗೂ ರವಿ ಓಲೇಕಾರ(ಪಕ್ಷೇತರ)
ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ೧)ಅರುಣಕುಮಾರ ಗುತ್ತೂರ(ಬಿಜೆಪಿ), ೨)ಪ್ರಕಾಶ ಕೋಳಿವಾಡ(ಕಾಂಗ್ರೆಸ್), ೩)ಮಂಜುನಾಥ ಗೌಡಶಿವಣ್ಣನವರ(ಜನತಾದಳ (ಜಾ)), ೪)ಹನುಮಂತಪ್ಪ ಕಬ್ಬಾರ(ಎಎಪಿ), ೫)ಚನ್ನವೀರಯ್ಯ ಹೊಳಗುಂದಿಮಠ(ಕೆಆರ್ಎಸ್ಪಿ), ೬)ತಳವಾರ ಶಿವಕುಮಾರ(ಐಎಂಪಿ), ೭)ಮಂಜುನಾಥ ಎನ್(ಸ್ವಯಂ ಕೃಷಿ ಪಾರ್ಟಿ), ೮)ಆರ್ ಶಂಕರ್(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ), ೯)ಸಂತೋಷಕುಮಾರ ಕ್ಯಾತಪ್ಪನವರ(ಉತ್ತಮ ಪ್ರಜಾಕೀಯ ಪಾರ್ಟಿ), ೧೦)ನಾರಾಯಣ ಪಾಟೀಲ (ಪಕ್ಷೇತರ), ೧೧)ಮೋಹನ್ ಹಂಡೆ(ಪಕ್ಷೇತರ), ೧೨)ಮಂಜುನಾಥ ಕೆ(ಪಕ್ಷೇತರ), ೧೩)ರುದ್ರಮುನಿ ರಾಮಕ್ಕನವರ(ಪಕ್ಷೇತರ), ೧೪)ಸಂತೋಷ ಕುಮಾರ ಪಾಟೀಲ(ಪಕ್ಷೇತರ).