ಚುನಾವಣಾ ಕರ್ತವ್ಯಕ್ಕೆ ಹಾವೇರಿಜಿಲ್ಲೆಗೆ ನಿಯೋಜನೆಗೊಂಡಿದ್ದ ಗುಜರಾತ್ ಮೂಲದ ಪೊಲೀಸ್ ರಘುಬಾ ಹೃದಯಾಘಾತದಿಂದ ಸಾವು
ಹಾವೇರಿ: ಮೇ.೧೦ರಂದು ನಡೆದ ಸಾವ್ರತ್ರಿಕ ವಿಧಾನಸಭಾ ಚುನಾವಣೆಯು ಶಾಂತಿ, ಸುವ್ಯವಸ್ಥೆಯಿಂದ ನಡೆಯಲು ಕಾರಣರಾಗಿದ್ದ ಪೊಲೀಸ್ ಇಲಾಖೆಯ ಗುಜರಾತ್ ಮೂಲದ ಪೊಲೀಸ್ರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಭಾನುವಾರ ಬೆಳಿಗ್ಗೆ ಕುಂದಗೋಳದಲ್ಲಿ ನಡೆದಿದೆ.
ಮೃತ ಪೊಲೀಸ್ ಗುಜರಾತ್ ರಾಜ್ಯದ ಕಚ್ಚಜಿಲ್ಲೆಯ ರಘುಬಾ ಜಡೇಜಾ(೪೮) ಎಂದು ಗುರುತಿಸಲಾಗಿದೆ. ರಘುಬಾ ಅವರು ಗುಜರಾತ್ ರಾಜ್ಯ ರಿಜರ್ವ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕದ ವಿಧಾನಸಭಾ ಚುನಾವಣೆಯ ಭದ್ರತಾ ಕರ್ತವ್ಯಕ್ಕೆ ಇವರು ಗುಜರಾತ್ ಪೊಲೀಸ್ ತಂಡದೊಂದಿಗೆ ರಾಜ್ಯಕ್ಕೆ ಆಗಮಿಸಿ ವಿವಿಧೆಡೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಕುಂದಗೋಳ ಕ್ಯಾಂಪ್ನಲ್ಲಿದ್ದ ಇವರು ಹಾವೇರಿಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಭದ್ರತಾ ಕಾರ್ಯನಿರ್ವಹಿಸಿದ್ದರು. ಚುನಾವಣಾ ಕರ್ತವ್ಯ ಮುಗಿಸಿ ಹಾವೇರಿಯಿಂದ ತಮ್ಮ ರಾಜ್ಯ ಗುಜರಾತ್ಗೆ ತೆರಳುವ ಸಂದರ್ಭದಲ್ಲಿ ಇವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಘುಬಾ ಅವರ ಶವವನ್ನು ಹುಬ್ಬಳ್ಳಿಯ ಕಿಮ್ಸ್ಗೆ ಸಾಗಿಸಲಾಗಿದ್ದ ಅಲ್ಲಿ ಪಿಎಂ ಮುಕ್ತಾಯಗೊಂಡ ನಂತರ ಶವವನ್ನು ಗುಜರಾತ್ಗೆ ಸಾಗಿಸಲು ಸಿದ್ದತೆಗಳನ್ನು ನಡೆಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಮೃತನ ಸಹೋದ್ಯೋಗಿಗಳು ಮಾತನಾಡಿದ್ದ, ಅಂಬ್ಯಲನ್ಸ್ ವಾಹನದಲ್ಲಿ ದೂರದ ಗುಜರಾತ್ಗೆ ಮೃತದೇಹವನ್ನು ಸಾಗಿಸುವುದು ತಡವಾಗುತ್ತದೆ. ಆದ ಕಾರಣ ವಿಮಾನ ಮೂಲಕ ಶವವನ್ನು ಗುಜರಾತಿಗೆ ಸಾಗಿಸಲು ವ್ಯವಸ್ಥೆ ಮಾಡಿದರೆ ಸೂಕ್ತ ಎನ್ನುವ ಅಭಿಪ್ರಯಾvಯ ತಿಳಿಸಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ಹಾವೇರಿಜಿಲ್ಲೆಗೆ ನಿಯೋಜನೆಗೊಂಡಿದ್ದ ಗುಜರಾತ್ ಮೂಲದ ಪೊಲೀಸ್ ರಘುಬಾ ಹೃದಯಾಘಾತದಿಂದ ಸಾವು
Date:
ಚುನಾವಣಾ ಕರ್ತವ್ಯಕ್ಕೆ ಹಾವೇರಿಜಿಲ್ಲೆಗೆ ನಿಯೋಜನೆಗೊಂಡಿದ್ದ ಗುಜರಾತ್ ಮೂಲದ ಪೊಲೀಸ್ ರಘುಬಾ ಹೃದಯಾಘಾತದಿಂದ ಸಾವು
ಹಾವೇರಿ: ಮೇ.೧೦ರಂದು ನಡೆದ ಸಾವ್ರತ್ರಿಕ ವಿಧಾನಸಭಾ ಚುನಾವಣೆಯು ಶಾಂತಿ, ಸುವ್ಯವಸ್ಥೆಯಿಂದ ನಡೆಯಲು ಕಾರಣರಾಗಿದ್ದ ಪೊಲೀಸ್ ಇಲಾಖೆಯ ಗುಜರಾತ್ ಮೂಲದ ಪೊಲೀಸ್ರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಭಾನುವಾರ ಬೆಳಿಗ್ಗೆ ಕುಂದಗೋಳದಲ್ಲಿ ನಡೆದಿದೆ.
ಮೃತ ಪೊಲೀಸ್ ಗುಜರಾತ್ ರಾಜ್ಯದ ಕಚ್ಚಜಿಲ್ಲೆಯ ರಘುಬಾ ಜಡೇಜಾ(೪೮) ಎಂದು ಗುರುತಿಸಲಾಗಿದೆ. ರಘುಬಾ ಅವರು ಗುಜರಾತ್ ರಾಜ್ಯ ರಿಜರ್ವ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕದ ವಿಧಾನಸಭಾ ಚುನಾವಣೆಯ ಭದ್ರತಾ ಕರ್ತವ್ಯಕ್ಕೆ ಇವರು ಗುಜರಾತ್ ಪೊಲೀಸ್ ತಂಡದೊಂದಿಗೆ ರಾಜ್ಯಕ್ಕೆ ಆಗಮಿಸಿ ವಿವಿಧೆಡೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಕುಂದಗೋಳ ಕ್ಯಾಂಪ್ನಲ್ಲಿದ್ದ ಇವರು ಹಾವೇರಿಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಭದ್ರತಾ ಕಾರ್ಯನಿರ್ವಹಿಸಿದ್ದರು. ಚುನಾವಣಾ ಕರ್ತವ್ಯ ಮುಗಿಸಿ ಹಾವೇರಿಯಿಂದ ತಮ್ಮ ರಾಜ್ಯ ಗುಜರಾತ್ಗೆ ತೆರಳುವ ಸಂದರ್ಭದಲ್ಲಿ ಇವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಘುಬಾ ಅವರ ಶವವನ್ನು ಹುಬ್ಬಳ್ಳಿಯ ಕಿಮ್ಸ್ಗೆ ಸಾಗಿಸಲಾಗಿದ್ದ ಅಲ್ಲಿ ಪಿಎಂ ಮುಕ್ತಾಯಗೊಂಡ ನಂತರ ಶವವನ್ನು ಗುಜರಾತ್ಗೆ ಸಾಗಿಸಲು ಸಿದ್ದತೆಗಳನ್ನು ನಡೆಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಮೃತನ ಸಹೋದ್ಯೋಗಿಗಳು ಮಾತನಾಡಿದ್ದ, ಅಂಬ್ಯಲನ್ಸ್ ವಾಹನದಲ್ಲಿ ದೂರದ ಗುಜರಾತ್ಗೆ ಮೃತದೇಹವನ್ನು ಸಾಗಿಸುವುದು ತಡವಾಗುತ್ತದೆ. ಆದ ಕಾರಣ ವಿಮಾನ ಮೂಲಕ ಶವವನ್ನು ಗುಜರಾತಿಗೆ ಸಾಗಿಸಲು ವ್ಯವಸ್ಥೆ ಮಾಡಿದರೆ ಸೂಕ್ತ ಎನ್ನುವ ಅಭಿಪ್ರಯಾvಯ ತಿಳಿಸಿದ್ದಾರೆ.