![]()
![]()
![]()
![]()
![]()
ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಗೋಡೆ ಕುಸಿದು ಮೂವರ ಮರಣಹಾವೇರಿ: ನಿರಂತರವಾಗಿ ಸುರಿಯತ್ತಿರುವ ಮಳೆಗೆ ಗೋಡೆನೆಂದು ಕುಸಿದು ಮೂವರು ಮರಣಹೊಂದಿರುವ ದುರ್ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.ಮನೆಯಲ್ಲಿ ಮಲಗಿದ್ದ ಸುಮಾರು 30 ವರ್ಷದ ಚೆನ್ನಮ್ಮ ಹಾಗೂ ಎರಡು ಎಳೆಯ ಕಂದಮ್ಮಗಳಾದ ಅಮೂಲ್ಯ ಮತ್ತು ಅನನ್ಯ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿವೆ. ಶುಕ್ರವಾರ ನಸುಕಿನ ಜಾವ ಸುಮಾರು 3.30 ಕ್ಕೆ ದುರ್ಘಟನೆ ನಡೆದಿದೆ.ಮನೆಯಲ್ಲಿ ಒಟ್ಟು 6 ಜನ ವಾಸವಾಗಿದ್ದರು.ಮನೆ ಗೋಡೆಗಳು ಕುಸಿದ ಹಿನ್ನಲೆ ಮನೆಯಲ್ಲಿ ಮಲಗಿದ್ದ ಆರು ಜನರ ಮೇಲೆ ಗೋಡೆಗಳುಬಿದ್ದಿವೆ.ನೆರೆ ಹೊರೆಯವರು ಗೊಡೆಯಡಿ ಸಿಲುಕಿದವರನ್ನು ಆಸ್ಪತ್ರೆಗೆ ದಾಖಲಿಸು ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದರು.ವಯೋವೃದ್ದೆ ಯಲ್ಲಮ್ಮ ಹಾಗೂ ಅವರ ಪುತ್ರ ಮುತ್ತು ಹರಕುಣಿಮತ್ತು ಸೊಸೆ ಸುನಿತಾ ಹರಕುಣಿಗೆ ಗಂಭೀರ ಗಾಯಗಳಾಗಿದ್ದು.ಸವಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಸವಣೂರು ತಾಲೂಕಿನ ಹುಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆನಡೆದಿದೆ.ಆಸ್ಪತ್ರೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಮತ್ತಿತರ ರು ಭೇಟಿನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಗೋಡೆ ಕುಸಿದು ಮೂವರ ಮರಣ
Date: