
ಹಾವೇರಿ; ಹೊಂಡದಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವು
ಹಾವೇರಿ: ವಾಕಿಂಗ್ ಮಾಡುವಾಗ ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವನ್ನಪ್ಪಿರುವ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಆಲದಕಟ್ಟಿ ಗ್ರಾಮದ ಶಂಭುಲಿಂಗಪ್ಪ ಹಂಸಭಾವಿ (೪೦) ಹಾಗೂ ಶರತ ಹಂಸಭಾವಿ (೮) ಎಂದು ಗುರುತಿಸಲಾಗಿದೆ. ತಂದೆ ಶಂಭುಲಿಂಗಪ್ಪ ವಿಶೇಷಚೇತನ ಮಗ ಶರತ್ನನ್ನು ವಾಕಿಂಗ್ಗೆ ಕರೆದುಕೊಂಡು ಹೋದಾಗ ದುರ್ಘಟನೆ ಸಂಭವಿಸಿದೆ.
ಗ್ರಾಮದ ಮಧ್ಯದಲ್ಲಿರುವ ಹೊಂಡದ ಬಳಿ ವಾಕಿಂಗ್ ಮಾಡುವಾಗ ಹೊಂಡದ ಸುತ್ತ ಹಸಿರು ಪಾಚಿ ಕಟ್ಟಿದ್ದರಿಂದ ಬಾಲಕ ಶರತ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಮಗನನ್ನು ರಕ್ಷಣೆ ಮಾಡಲು ಮುಂದಾಗಿದ್ದ ಶಂಭುಲಿಂಗಪ್ಪನೂ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಈಜು ಬಾರದೆ ಮೃತಪಟ್ಟಿದ್ದಾರೆ. ಬೆಳಗಿನ ಹೊತ್ತು ಹೊಂಡದ ಬಳಿ ಹೊಲಕ್ಕೆ ಹೊರಟಿದ್ದ ಸ್ಥಳೀಯರೋರ್ವರು ಹೊಂಡದಲ್ಲಿ ಬಿದ್ದಿದ್ದ ತಂದೆ-ಮಗನ ರಕ್ಷಣೆಗೆ ಪರಿಚಿತರಿಗೆ ಪೋನ ಕರೆಮಾಡಿದರು, ಆದರೆ ಅಷ್ಟರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶವಗಳನ್ನು ಹೊರಕ್ಕೆ ತಗೆದು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಸ್ಥಳಲ್ಲಿ ಮೃತರ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ವಾಕಿಂಗ್ ಮಾಡುವಾಗ ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವನ್ನಪ್ಪಿರುವ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಆಲದಕಟ್ಟಿ ಗ್ರಾಮದ ಶಂಭುಲಿಂಗಪ್ಪ ಹಂಸಭಾವಿ (೪೦) ಹಾಗೂ ಶರತ ಹಂಸಭಾವಿ (೮) ಎಂದು ಗುರುತಿಸಲಾಗಿದೆ. ತಂದೆ ಶಂಭುಲಿಂಗಪ್ಪ ವಿಶೇಷಚೇತನ ಮಗ ಶರತ್ನನ್ನು ವಾಕಿಂಗ್ಗೆ ಕರೆದುಕೊಂಡು ಹೋದಾಗ ದುರ್ಘಟನೆ ಸಂಭವಿಸಿದೆ.
ಗ್ರಾಮದ ಮಧ್ಯದಲ್ಲಿರುವ ಹೊಂಡದ ಬಳಿ ವಾಕಿಂಗ್ ಮಾಡುವಾಗ ಹೊಂಡದ ಸುತ್ತ ಹಸಿರು ಪಾಚಿ ಕಟ್ಟಿದ್ದರಿಂದ ಬಾಲಕ ಶರತ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಮಗನನ್ನು ರಕ್ಷಣೆ ಮಾಡಲು ಮುಂದಾಗಿದ್ದ ಶಂಭುಲಿಂಗಪ್ಪನೂ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಈಜು ಬಾರದೆ ಮೃತಪಟ್ಟಿದ್ದಾರೆ. ಬೆಳಗಿನ ಹೊತ್ತು ಹೊಂಡದ ಬಳಿ ಹೊಲಕ್ಕೆ ಹೊರಟಿದ್ದ ಸ್ಥಳೀಯರೋರ್ವರು ಹೊಂಡದಲ್ಲಿ ಬಿದ್ದಿದ್ದ ತಂದೆ-ಮಗನ ರಕ್ಷಣೆಗೆ ಪರಿಚಿತರಿಗೆ ಪೋನ ಕರೆಮಾಡಿದರು, ಆದರೆ ಅಷ್ಟರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶವಗಳನ್ನು ಹೊರಕ್ಕೆ ತಗೆದು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಸ್ಥಳಲ್ಲಿ ಮೃತರ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

