
ಉದ್ಯೋಗ ತರಬೇತಿಯಿಂದ ಸ್ವ-ಉದ್ಯೋಗ ಸೃಷ್ಟಿ: ಅಬ್ದುಲ್ ರಹಿಂ
ಹಾವೇರಿ : ನಿರುದ್ಯೋಗಿ ಯುವಕ-ಯುವತಿಯರಿಗೆ, ಗೃಹಿಣಿಯರಿಗೆ ಹಾಗೂ ರೈತಾಪಿ ಕುಟುಂಬಗಳಿಗೆ ಸೂಕ್ತ ಸ್ವ ಉದ್ಯೋಗ ತರಬೇತಿ ದೊರೆತರೆ ಮಾತ್ರ ಹೆಚ್ಚು ಉದ್ಯೋಗ ಸೃಷ್ಟಿಯಾಗಲು ಸಾಧ್ಯ ಎಂದು ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಂ ತಿಳಿಸಿದರು. ದೇವಗಿರಿಯ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ೧೦ ದಿನಗಳ ಅಣಬೆ ಬೇಸಾಯ ಉಚಿತ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರುದ್ಯೋಗಿಗಳಿಗೆ ನಮ್ಮ ಸಂಸ್ಥೆಯಿಂದ ಉಚಿತವಾಗಿ ಸ್ವ-ಉದ್ಯೋಗ ತರಬೇತಿ ನೀಡಿ, ಉದ್ಯೋಗ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದೆ ಎಂದು ಶ್ರೀಮತಿ ಶಾಂತಾ ಮಂಚಿಕೊಪ್ಪ ತಿಳಿಸಿದರು.
ಮುಖ್ಯ ಅತಿಥಿ ದೇವಿಪ್ರಸಾದ ಮಾತನಾಡಿ, ಅಣಬೆಯ ಪ್ರಯೋಜನಗಳೇನು? ಅದರಿಂದ ಯಾವೇಲ್ಲ ಉತ್ಪನ್ನಗಳನ್ನ ತಯಾರಿಸಬಹುದು, ಆರೋಗ್ಯದ ದೃಷ್ಟಿಯಿಂದ ಪ್ರಯೋಜನೆಗಳನ್ನ ತಿಳಿಸಿ, ನಿರುದ್ಯೋಗ ನಿರ್ಮೂಲನೆಯೇ ಬ್ಯಾಂಕ್ ಆಫ್ ಬರೋಡಾದ ಉದ್ದೇಶವಾಗಿದ್ದು, ಎಲ್ಲರೂ ಇದರ ಉಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗಿಗಳಾಗಬೇಕು ಎಂದರು.
ಸಂಸ್ಥೆಯ ಸಿಬ್ಬಂದಿಗಳಾದ ಮಂಜುಳಾ ಯರಳ್ಳಿ, ಕು. ಸುಮಾ ಭಜಂತ್ರಿ, ಗಣೇಶ, ಸುಭಾಸ ಸೇರಿದಂತೆ ತರಬೇತಿ ವಿದ್ಯಾರ್ಥಿಗಳಾದ ಅಮೃತ ಗುಂಜಾಳ, ವಿನಾಯಕ ದೇಶಪಾಂಡೆ, ಕರಿಯಪ್ಪ ಕಮತಳ್ಳಿ, ರಾಧವ್ವ ಗಾಜನವರ, ಪ್ರತಾಪ ಸಂಗಣ್ಣನವರ, ಮಹಾದೇವ ಉಮ್ಮಣ್ಣನವರ, ಕರಿಲಿಂಗಪ್ಪ, ಮೋಹನಕುಮಾರ ವಿ.ಎಸ್, ಜಗನ್ನಾಥ, ಭಾರತಿ ಯಲಿವಾಳ, ಶ್ರೀದೇವಿ ಪಾಟೀಲ, ಮನೋಜ ಜಿ.ಹೆಚ್. ಹೆಚ್. ಆರ್. ಶಿವಕುಮಾರ, ಶ್ರೀಕಾಂತ ಎಂ.ಎಸ್, ಬಿಲಾಲ ಖಾನ, ಮಲ್ಲಣ್ಣ, ವಿನಾಯಕ ಹೊಸೂರು, ಆಕಾಶ ಬಾಳಂಬೀಡ, ಸಿದ್ದಾರ್ಥ ಮಾದರ, ವಿನಾಯಕ ಸುಲಂಖೆ, ಪ್ರತೀಕ ಪಡಿಗೋದಿ, ಗಾಯತ್ರಿ ಪಿ.ಎಸ್., ಮಂಜುನಾಥ ಯಾದವಾಡ, ನವೀನ ಹೊಸಕೋಟಿ, ಭಾರತಿ ಭೋವಿ, ಸರಫರಾಜ ಹಳಗಿ, ಗೋಣಿಬಸಪ್ಪ ಯರಡತ್ತಿನಹಳ್ಳಿ, ಜೆ. ಸರ್ಪಭೂಷಣ, ವಿನಾಯಕ ಮುನವಳ್ಳಿ, ದಾದಾಪೀರ ಟಿ, ಬಸವರಾಜ ತಳವಾರ ಇದ್ದರು.

