
ವಿದ್ಯುತ್ ಖಾಸಗಿಕರಣ ಕೈಬಿಡಲು ರೈತ ಸಂಘದ ಆಗ್ರಹ
ಹಾವೇರಿ: ರಾಜ್ಯ ಸರ್ಕಾರ ವಿದ್ಯುತ್ ಖಾಸಗಿಕರಣ ವಿರೋಧಿಸಿ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ ವಿದ್ಯುತ್ ಖಾಸಗಿ ಕರಣದಿಂದ ಮೊಬೈಲ್ ನಂತೆ ಕರೆನ್ಸಿ ಹಾಕಿ ವಿದ್ಯುತ್ ಬಳಸಬೇಕಾಗುತ್ತದೆ. ನೀರಾವರಿ ಪಂಪ್ ಸೆಟ್ ಬಳಕೆದಾರರಿಗೆ ಇದು ತೊಂದರೆಯಾಗಲಿದೆ. ಹಣ ಕೊಟ್ಟರೆ ಮಾತ್ರ ವಿದ್ಯುತ್ ಕೊಡುತ್ತೇವೆ ಎಂದು ಹೇಳುವ ಕಾಲ ಸನ್ನಿತವಾಗಿದೆ, ಸರ್ಕಾರ ವಿದ್ಯುತ್ ಖಾಸಗಿಕರಣ ರದ್ದುಗೊಳಿಸಬೇಕು. ರೈತರ ಪಂಪ್ ಸೆಟ್ಟಗಳಿಗೆ ಉಚಿತ ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಹೊಸದಾಗಿ ಕೊರೆಸಿದ ರೈತರ ಕೊಳವೆ ಬಾವಿಗಳಿಗೆ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಒತ್ತಾಯಿಸಿದರು.
ಖಾಸಗಿ ಕಂಪನಿ ಟಾಟಾ ಪವರ್ ಲಿಮಿಟೆಡ್ ಈಗಾಗಲೇ ೧೯ ಜಿಲ್ಲೆಗಳಲ್ಲಿ ವಿದ್ಯುತ್ ನಿರ್ವಹಣೆ ಹೊಣೆ ವಹಿಸುವ ಪ್ರಕ್ರಿಯೆ ಹುನ್ನಾರ ನಡೆದಿದೆ. ಇದು ರೈತರ ಬಡವರ ಮೇಲೆ ಆರ್ಥಿಕ ಹೊರೆ ಹೇರುವ ಹುನ್ನಾರ, ಇದರಿಂದ ಮೊಬೈಲ್ ರಿ ಚಾರ್ಜ್ನಂತೆ ವಿದ್ಯುತ್ ಕಲ್ಪಿಸುವ ಸನ್ನಿವೇಶ ಬರುತ್ತದೆ. ರೈತರ ಉಚಿತವಾದ ವಿದ್ಯುತ್ ಕಡಿತವಾಗುತ್ತದೆ, ವಿದ್ಯುತ್ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರನ್ನು ಬೀದಿಗೆ ತಳ್ಳಿದಂತಾಗುತ್ತದೆ, ಆದ್ದರಿಂದ ವಿದ್ಯುತ್ ಕಂಪನಿಗಳ ಖಾಸಗಿಕರಣ ಕೈಬಿಡಬೇಕು ಎಂದು ರೈತ ಸಂಘಟನೆ ಒತ್ತಾಯವಾಗಿದೆ ಎಂದರು.
ಸಂಘಟನೆ ಪದಾಧಿಕಾರಿಗ ಎಂ. ಎಸ್. ಪಾಟೀಲ್, ಮಹಾಲಿಂಗಪ್ಪ ಬಿದರಮಳ್ಳಿ, ಶೀಲಾ ಭದ್ರಾವತಿ, ಮಸೀಮ ಬಾನು ಲೋಹಾರ್, ಚನ್ನಬಸಯ್ಯ ದೊಡ್ಡ ಕಂತಿನ್ಮಠ, ರವಿರಾಜ್ ರಾಗಿಕೊಪ್ಪ, ಅಹಮದ್ಖಾನ್ ನೆಗಳೂರ್, ನಾಗಪ್ಪ ಬಿದರಗಡ್ಡಿ, ಶಿವನಗೌಡ ಪಾಟೀಲ್, ಚನ್ನಬಸಪ್ಪ ಅಂಗಡಿ, ಮಂಜು ಹರಿಜನ, ಎಂ. ಎಂ. ಗುಲಾಮಲಿಶ ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು
ಹಾವೇರಿ: ರಾಜ್ಯ ಸರ್ಕಾರ ವಿದ್ಯುತ್ ಖಾಸಗಿಕರಣ ವಿರೋಧಿಸಿ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ ವಿದ್ಯುತ್ ಖಾಸಗಿ ಕರಣದಿಂದ ಮೊಬೈಲ್ ನಂತೆ ಕರೆನ್ಸಿ ಹಾಕಿ ವಿದ್ಯುತ್ ಬಳಸಬೇಕಾಗುತ್ತದೆ. ನೀರಾವರಿ ಪಂಪ್ ಸೆಟ್ ಬಳಕೆದಾರರಿಗೆ ಇದು ತೊಂದರೆಯಾಗಲಿದೆ. ಹಣ ಕೊಟ್ಟರೆ ಮಾತ್ರ ವಿದ್ಯುತ್ ಕೊಡುತ್ತೇವೆ ಎಂದು ಹೇಳುವ ಕಾಲ ಸನ್ನಿತವಾಗಿದೆ, ಸರ್ಕಾರ ವಿದ್ಯುತ್ ಖಾಸಗಿಕರಣ ರದ್ದುಗೊಳಿಸಬೇಕು. ರೈತರ ಪಂಪ್ ಸೆಟ್ಟಗಳಿಗೆ ಉಚಿತ ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಹೊಸದಾಗಿ ಕೊರೆಸಿದ ರೈತರ ಕೊಳವೆ ಬಾವಿಗಳಿಗೆ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಒತ್ತಾಯಿಸಿದರು.
ಖಾಸಗಿ ಕಂಪನಿ ಟಾಟಾ ಪವರ್ ಲಿಮಿಟೆಡ್ ಈಗಾಗಲೇ ೧೯ ಜಿಲ್ಲೆಗಳಲ್ಲಿ ವಿದ್ಯುತ್ ನಿರ್ವಹಣೆ ಹೊಣೆ ವಹಿಸುವ ಪ್ರಕ್ರಿಯೆ ಹುನ್ನಾರ ನಡೆದಿದೆ. ಇದು ರೈತರ ಬಡವರ ಮೇಲೆ ಆರ್ಥಿಕ ಹೊರೆ ಹೇರುವ ಹುನ್ನಾರ, ಇದರಿಂದ ಮೊಬೈಲ್ ರಿ ಚಾರ್ಜ್ನಂತೆ ವಿದ್ಯುತ್ ಕಲ್ಪಿಸುವ ಸನ್ನಿವೇಶ ಬರುತ್ತದೆ. ರೈತರ ಉಚಿತವಾದ ವಿದ್ಯುತ್ ಕಡಿತವಾಗುತ್ತದೆ, ವಿದ್ಯುತ್ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರನ್ನು ಬೀದಿಗೆ ತಳ್ಳಿದಂತಾಗುತ್ತದೆ, ಆದ್ದರಿಂದ ವಿದ್ಯುತ್ ಕಂಪನಿಗಳ ಖಾಸಗಿಕರಣ ಕೈಬಿಡಬೇಕು ಎಂದು ರೈತ ಸಂಘಟನೆ ಒತ್ತಾಯವಾಗಿದೆ ಎಂದರು.
ಸಂಘಟನೆ ಪದಾಧಿಕಾರಿಗ ಎಂ. ಎಸ್. ಪಾಟೀಲ್, ಮಹಾಲಿಂಗಪ್ಪ ಬಿದರಮಳ್ಳಿ, ಶೀಲಾ ಭದ್ರಾವತಿ, ಮಸೀಮ ಬಾನು ಲೋಹಾರ್, ಚನ್ನಬಸಯ್ಯ ದೊಡ್ಡ ಕಂತಿನ್ಮಠ, ರವಿರಾಜ್ ರಾಗಿಕೊಪ್ಪ, ಅಹಮದ್ಖಾನ್ ನೆಗಳೂರ್, ನಾಗಪ್ಪ ಬಿದರಗಡ್ಡಿ, ಶಿವನಗೌಡ ಪಾಟೀಲ್, ಚನ್ನಬಸಪ್ಪ ಅಂಗಡಿ, ಮಂಜು ಹರಿಜನ, ಎಂ. ಎಂ. ಗುಲಾಮಲಿಶ ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು
—
malatesh angur
sub-editor
kourava daily,
haveri
sub-editor
kourava daily,
haveri

