
ಹಾವೇರಿ ಜಿಲ್ಲಾ ಪಂಚಾಯತ್ಗೆ ಸಿಇಓ ಆಗಿ ದಲ್ಜೀತ್ ಕುಮಾರ್ ವರ್ಗಾವಣೆ
ಹಾವೇರಿ: ಹಾವೇರಿಜಿಲ್ಲಾ ಪಂಚಾಯತ್ಗೆ ನೂತನ ಸಿಇಓ ಆಗಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ರುಚಿ ಬಿಂದಾಲ್ ಅವರ ವರ್ಗಾವಭೆಯಿಂದ ತೆರವಾಗಿದ್ದ ಜಿ.ಪಂ, ಸಿಇಓ ಸ್ಥಾನಕ್ಕೆ ದಲ್ಜೀತ್ ಕುಮಾರ್ ನೇಮಕಗೊಂಡಿದ್ದಾರೆ.
ದಲ್ಜೀತ್ ಕುಮಾರ್ ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ), ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್, ಗ್ರೇಟರ್ ಬೆಂಗಳೂರು ಪ್ರದೇಶ, ಬೆಂಗಳೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಹಾವೇರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಖಾಲಿ ಹುದ್ದೆಗೆ ವರ್ಗಾಯಿಸಲಾಗಿದೆ. ಇವರು ೨೦೨೧ ರ ಬ್ಯಾಚ್ನ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದು, ಕರ್ನಾಟಕ ಕೇಡರ್ಗೆ ನಿಯೋಜಿಸಲ್ಪಟ್ಟಿದ್ದಾರೆ. ಅವರು ಐಐಟಿ ರೂರ್ಕಿಯಿಂದ ಪೇಪರ್ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.

