ಚಿತ್ರ/ಲೇಖನ: ಮಾಲತೇಶ ಅಂಗೂರ, ಹಾವೇರಿ.
ಮೊ:೯೪೪೮೦೨೯೪೧೭
ಹಾವೇರಿ ಜಿಲ್ಲೆಯ ಇತಿಹಾಸದ ಪುಟಗಳಲ್ಲಿ ಮುಕುಟ ಪ್ರಾಯಾದಂತಿರುವ ಸವಣೂರಿನ ಹಿರೇಕಲ್ಮಠದ ಆವರಣದಲ್ಲಿನ ಮೂರು ದೊಡ್ಡಹುಣಸೆಮರಗಳಲ್ಲಿ ಮೂರನೆಯ ೧೨.೫೩ ಮೀ ಸುತ್ತಳತೆ. ೧೮ ಮೀ ಎತ್ತರದ ಮರದ ಬೇರುಗಳಿಗೆ ಗೆದ್ದಲು ಹತ್ತಿದ ಪರಿಣಾಮ ಜುಲೈ. ೭-೨೦೨೩ ರಂದು ಇದ್ದಕ್ಕಿದ್ದಂತೆ ಧರೆಗುರುಳಿತ್ತು. ಬಹುತೇಕರು “ಈ ಮರದ ಆಯುಷ್ಯ ಮುಕ್ತಾಯಿತು” ಎಂದು ಕೊಂಡಿದ್ದರು. “ತಲತಲಾಂತರಿAದ ಈ ಮೂರುಮರಗಳನ್ನು ಜತನದಿಂದ ರಕ್ಷಿಸುತ್ತಾ ಬಂದಿರುವ ಹಿರೇಕಲ್ಮಠದ ಈಗಿನ ಸ್ವಾಮಿಜಿ ಚನ್ನಬಸವಶ್ರೀಗಳು, ಪರಿಸರ ಪ್ರೇಮಿಗಳು ಆತಂಕಕ್ಕೆ ಒಳಗಾಗಿದ್ದರು”.
ದೊಡ್ಡ ಹುಣಸೆ ಮರ ಗತ ಇತಿಹಾಸ ಸೇರುವುದೇ? ಮರಳಿ ಜೀವಪಡೆಯುವುದೇ! ಎನ್ನುವ ಚಿಂತೆಯಲ್ಲಿರುವಾಗ, ದೊಡ್ಡ ಹುಣಸೆ ಮರ ಧರೆಗೆ ಉರುಲಿದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ, ಆಡಳಿತ ವ್ಯವಸ್ಥೆ ಮರದ ರಕ್ಷಣೆಗೆ ಧಾವಿಸಿತು. “ಸರ್ಕಾರದ ಕ್ರಿಯಶೀಲ ಅಧಿಕಾರಿಗಳು ಮನಸ್ಸು ಮಾಡಿದರೆ ಏನೇಲ್ಲಾ ಸಾಧ್ಯ! ಎನ್ನುವದಕ್ಕೆ ಧರೆಗೆ ಉರುಳಿದ್ದ ಸವಣೂರಿನ ದೊಡ್ಡ ಹುಣಸೆ ಮರಕ್ಕೆ ಮರುಜನ್ಮ ನೀಡಿರುವ ಘಟನೆ ಸಾಕ್ಷಿಯಾಗಿದೆ”.
ಹಾವೇರಿಯ ಜಿಲ್ಲಾಡಳಿತ, ಜಿಲ್ಲೆಯ ಅರಣ್ಯ ಇಲಾಖೆ, ಸವಣೂರು ತಾಲೂಕಾ ಆಡಳಿತದ ಅಧಿಕಾರಿಗಳು, ಶಿರಸಿ ಮತ್ತು ಧಾರವಾಡ-ಬೆಂಗಳೂರಿನಿAದ ಆಗಮನಿಸಿದ್ದ ವಿಜ್ಞಾನಿಗಳು “ಉರಳಿಬಿದ್ದ ಮರಕ್ಕೆ ಮರುಜನ್ಮ ನೀಡುವ ಬಗ್ಗೆ ಹಲವಾರು ನಿಟ್ಟಿನಲ್ಲಿ ಆಲೋಚಿಸಿ ಮರಕ್ಕೆ ಮರುಜನ್ಮ ನೀಡುವ ಯೋಜನೆಯನ್ನು ಸಿದ್ದಪಡಿಸಿದರು”.
ಜುಲೈ.೧೪-೨೦೨೩ರಂದು ಗುರುವಾರ ಬೆಳಿಗ್ಗೆಯಿಂದ ಮರಕ್ಕೆ ಮರುಜನ್ಮ ನೀಡುವ ಸವಾಲಿನ ಕಾರ್ಯಕ್ಕೆ ಕೈಹಾಕಲಾಯಿತು. “ಮರಕ್ಕೆ ಮರುಜನ್ಮ ನೀಡುವ ಕಾರ್ಯಾಚರಣೆ ಆರಂಭವಾಗುತ್ತಿದ್ದAತೆಯೇ ಬುದ್ದನ ರೀತಿಯಲ್ಲಿ ಮಲಗಿದ್ದ ಮರ ಮೆಲ್ಲಗೆ ಮಾತನಾಡುವಂತೆ, ಉಸಿರಾಡುತ್ತಿರುವಂತೆ ತೋರಲಾರಂಭಿಸಿತು.” “೨ಸಾವಿರ ವರ್ಷಗಳ ಹಳೆಯ ಹಾಗೂ ಗತಿಸಿಹೋದ ಇತಿಹಾಸದ ಜೀವಂತಸಾಕ್ಷಿ ಎನ್ನುವಂತಿರುವ ಮೂರು ದೊಡ್ಡ ಹುಣಸೆ ಮರಗಳಲ್ಲಿ ಜುಲೈ ೭ ರಂದು ನೆಲಕ್ಕುರುಳಿದ ಮೂರನೆ ೧೨.೫೩ ಮೀ ಸುತ್ತಳತೆ. ೧೮ ಮೀ ಎತ್ತರದ ಬಿದ್ದ ಮರವು ಸೇರಿದಂತೆ ಮೂರುಮರಗಳನ್ನು ಸಂತ ಗೋರಕನಾಥರು ನೆಟ್ಟಿದ್ದರು ಎಂದು ಹೇಳಲಾಗುತ್ತಿದೆ”.


“ಮರವನ್ನು ಮರಳಿ ನೆಡುವ ಕಾರ್ಯಾಚರಣೆಗೆ ಬೆಂಗಳೂರಿನಿAದ ಸುಮಾರು ೪೦೦ ಟನ್ ಬಾರ ಎತ್ತುವ ಸಾಮರ್ಥ್ಯ ಹೊಂದಿರುವ ಬ್ರಹದಾಕಾರದ ಕ್ರೇನ್ ತರಿಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ, ಸ್ಥಳೀಯ ಪೊಲೀಸರು ಸತತವಾಗಿ ಪರಿಶ್ರಮ ಪಟ್ಟು ಮರ ಬಿದ್ದಸ್ಥಳದಲ್ಲಿಯೇ ಎಂಟು ಅಡಿ ಆಳದ ಗುಂಡಿಯಲ್ಲಿ ಮರವನ್ನು ನೆಟ್ಟು ನಿಟ್ಟುಸಿರು ಬಿಟ್ಟರು”.
“ಬೆಂಗಳೂರಿನಿAದ ತರಿಸಲಾಗಿದ್ದ ಬ್ರಹದಾಕಾರದ ಕ್ರೇನ್ ಹಾಗೂ ಎರಡು ಜೇಸಿಬಿಯಂತ್ರಗಳ ಮೂಲಕ ಸುಮಾರು ಹತ್ತಾರುಟನ್ ಬಾರವಿದ್ದ ದೊಡ್ಡಹುಣಸೆಮರವನ್ನು ಮೇಲೆಕ್ಕಿತ್ತಿ ಎಂಟು ಅಡಿ ಆಳದ ಬ್ರಹತ್ ಗುಂಡಿಯಲ್ಲಿ ಮರವನ್ನು ನೆಡವು ಮೂಲಕ ಮರಕ್ಕೆ ಮರು ಜೀವ ನೀಡಲಾಯಿತು”.
“ಅನಾರೋಗ್ಯಕ್ಕೆ ತುತ್ತಾದ ಮನುಷ್ಯ, ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಸರ್ವೆ ಸಾಮಾನ್ಯ. ಆದರೆ, ನೆಲಕ್ಕುರುಳಿದ ಮರಕ್ಕೆ ಚಿಕಿತ್ಸೆ ನೀಡಿ ಮತ್ತೆ ಮೊದಲಿದ್ದ ಜಾಗದಲ್ಲಿ ಈಗ ನೆಡಲಾಗಿದೆ. ಜು.೭.೨೦೨೩ ರಂದು ಧರೆಗುರುಳಿದ್ದ ಐತಿಹಾಸಿಕ ಸವಣೂರಿನ ದೊಡ್ಡ ಹುಣಸೆಮರವನ್ನು ಜುಲೈ.೧೪-೨೦೨೩ರಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಙಾನಿಗಳ ತಂಡ ಮತ್ತೆ ನೆಟ್ಟ ಸಂತಸಪಟ್ಟರು”. ಮರವನ್ನು ಮರಳಿ ನೆಡುವ ದೃಶ್ಯವನ್ನು ನೂರಾರು ಜನರು ಹಾಗೂ ಮಠದ ಚನ್ನಬಸವಸ್ವಾಮಿಜಿ, ಹಾವೇರಿಯ ಹೊಸಮಠದ ಸ್ವಾಮಿಜಿ ವೀಕ್ಷಿಸಿದರು.


ಮರ ನೆಟ್ಟ ಬಗ್ಗೆ ಡಿಎಫ್ ಓ ಬಾಲಕೃಷ್ಣನ್ ಮಾತನಾಡಿ “ಮರದ ಬುಡದಲ್ಲಿ ಬೇರುಗಳು ಸಂಪೂರ್ಣವಾಗಿ ಕೊಳೆತ ಪರಿಣಾಮ ಮರ ಬಿದ್ದಿದೆ ಎಂದು ವಿಜ್ಞಾನಿಗಳು, ಅಧಿಕಾರಿಗಳು ಹೇಳಿದ್ದಾರೆ. ಇದೆ ಕಾರಣಕ್ಕೆ ಮರದ ಬುಡದಲ್ಲಿ ಕೊಳೆತ ಭಾಗವನ್ನ ಸ್ವಚ್ಛ ಮಾಡಿ ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಗಿದೆ. ಭೂಮಿಯಲ್ಲಿ ತೊಡಿರುವ ಗುಂಡಿಯಲ್ಲಿಯು ರಾಸಾಯನಿಕಗಳನ್ನ ಹಾಕಲಾಗಿದೆ. ಮರದ ಟೊಂಗೆಗಳನ್ನ ಕತ್ತರಿಸಿ ಸಗಣಿಯನ್ನು ಸಿಂಪಡಣೆ ಮಾಡಿ ಟ್ರೀಟ್ ಮೆಂಟ್ ಮಾಡಲಾಗಿದೆ. ಬೃಹತ್ ಗಾತ್ರದ ಕ್ರೇನ್ ಹಾಗೂ ಜೆಸಿಬಿಗಳನ್ನ ಬಳಸಿಕೊಂಡು ಮರವನ್ನ ಅದೆ ಸ್ಥಳದಲ್ಲಿ ನೆಡಲಾಗಿದೆ. ಈ ಮರ ಚಿಗಿಯಲು ಕನಿಷ್ಠ ೨ತಿಂಗಳು ಬೇಕಾಗುತ್ತದೆ, ಮರ ಮರಳಿ ಬೆಳೆಯುತ್ತದೆ” ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
“ಮರಗಳಿಗೆ ದೊಡ್ಡಣ್ಣ ಎನ್ನಲಾಗುವ ದೊಡ್ಡ ಹುಣಸೆ ಮರಕ್ಕೆ ಮರುಜೀವ ಬಂದಿದೆ, ಮರವನ್ನು ಪುನರುಜ್ಜಿವನಗೊಳಿಸಲು ವಿವಿಧ ಚಿಕಿತ್ಸೆಗಳನ್ನು ನೀಡಲಾಯಿತು. ಕೀಟನಾಶಕ -ಲೀಂದ್ರನಾಶಕ ಮತ್ತು ಮೂಲ ಹಾರ್ಮೋನುಗಳ ಜನರೇಟರ್ ಮಿಶ್ರಣವನ್ನು ಬಳಸಲಾಗದೆ. ಮರು ನಾಟಿ ಮಾಡುವ ಮೊದಲು ವರ್ಮಿಕಾಂಪೋಸ್ಟ್ ಅನ್ನು ಒಳಗೊಂಡಿರುವ ಉತ್ತಮ ಪ್ರಮಾಣದ ಮಣ್ಣನ್ನು ಬುಡಕ್ಕೆ ಹಾಕಲಾಗಿದೆ. ಮರದ ಜೋಡಣೆಯನ್ನು ಅದು ಮತ್ತೆ ಬೀಳದಂತೆ ನಿರ್ವಹಿಸಲಾಗಿದೆ”. ದೊಡ್ಡ ಹುಣಸೆ ಮರಕ್ಕೆ ಮರುಜನ್ಮ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು, ಡಿಎಫ್ಓ ಬಾಲಕೃಷ್ಣ,ಸವಣೂರು ತಹಶೀಲ್ದಾರ ಅನಿಲ್ಕುಮಾರ ಸೇರಿದಂತೆ ೆಮರವನ್ನ ನೆಡುವಲ್ಲಿ ಹಗಲಿರುಳು ಶ್ರಮಿಸಿದ ಅರಣ್ಯ ಇಲಾಖೆ ಹಾಗೂ ಕೃಷಿ ವಿಜ್ಣಾನಿಗಳಿಗೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಅಭಿನಂಧನೆ ಸಲ್ಲಿಸಿದ್ದಾರೆ.
ಭಾರೀ ಗಾತ್ರದ ಹಣ್ಣುಗಳು
ದೊಡ್ಡಹುಣಸೆಮರದ ಹಣ್ಣುಗಳು ಸಹ ಮರಕ್ಕೆ ತಕ್ಕಂತೆ ಇವೆ, ಭಾರೀಗಾತ್ರದ ಹಣ್ಣುಗಳು ಇವುಗಳು ಸಿಪ್ಪೆಧರಿಸಿ ತೆಂಗಿನಕಾಯಿಯ ಗಾತ್ರದಕಾಯಿಗಳನ್ನು ಬಿಡುತ್ತಿದ್ದು ಕಾಯಿಯ ಮೇಲ್ಬಾಗದಲ್ಲಿ ಬಟ್ಟೆಯಂಥ ಮೆತ್ತನೆಯ ಪದರದಂತಹ ಹೊದಿಕೆಯನ್ನು ಹೊಂದಿವೆ. ಕಾಯಿಯನ್ನು ಒಡೆದರೆ ಒಳಗಡೆ ದಪ್ಪನೆಯ ಜೇಡರ ಬಲಿಯಂತೆ ಕಾಣಿಸುವ ಬೆಳ್ಳನೆಯ ಹುಣಸೆ ಹಣ್ಣುಗಳನ್ನು ಕಾಣಬಹುದು. ಈ ಹಣ್ಣುಗಳು ಸ್ವಲ್ಪ ಹುಳಿ ಮತ್ತು ಸಿಹಿಯಾದ ರುಚಿಯನ್ನು ಹೊಂದಿವೆ. ಗಾತ್ರದಲ್ಲಿ ದೊಡ್ಡದಾದ ಗಾತ್ರದ ಹಣ್ಣುಗಳನ್ನು ಬಿಡುವುದರಿಂದ ಈ ವೃಕ್ಷಗಳಿಗೆ ದೊಡ್ಡ ಹುಣಸೇ ಮರ ಎಂಬ ಹೆಸರು ಬಂದಿದೆ.

ವೈವಿಧ್ಯಮಯ ಹೆಸರುಗಳು
ದೊಡ್ಡಹುಣಸೆ, ಆನೆಹುಣಸೆ, ಮುಗಿಮಾವು ಮತ್ತು ಬ್ರಹ್ಮಾಮಿಕ್ ವೃಕ್ಷಗಳೆಂಬ ವೈವಿಧ್ಯಮಯ ಹೆಸರುಗಳಿಂದ ಈ ವೃಕ್ಷಗಳನ್ನು ಕರೆಯಲಾಗುತ್ತದೆ. ಈ ಅಪರೂಪದ ವೃಕ್ಷದ ವೈಜ್ಞಾನಿಕ ಹೆಸರು ಆಡೆನಿಯಾ ಡಿಟಾಟಾ ಎಂದು, ಈ ಮರಗಳು ಬೂರುಗದ ಹತ್ತಿಯ ಕುಟುಂಬಕ್ಕೆ ಸೇರಿರುವುದರಿಂದ ಇವುಗಳನ್ನು ಆಂಗ್ಲ ಭಾಷೆಯಲ್ಲಿ ಬೊಬಾಟ್ ಶ್ರೀ, ಮಂಕಿ ಬ್ರೆಡ್ ಟ್ರೇ, ಆಫ್ರಿಕನ್ ಕಲಬಾಷ್ ಟ್ರೇ. ಸೋರ್ ಗೋಡರ ಟ್ರೇ ಎಂಬ ವಿಭಿನ್ನ ಹೆಸರುಗಳಿಂದಲೂ ಕರೆಯುತ್ತಾರೆ.
೬೦೦೦ ವರ್ಷ ಬದುಕಬಲ್ಲವಂತೆ!
ದೊಡ್ಡಹುಣಸೆಮರಗಳು ೬೦೦೦ ವರ್ಷ ಬದುಕಬಲ್ಲವಂತೆ! ಈ ಮರಗಳು ಆಫ್ರಿಕಾಖಂಡಕ್ಕೆ ಸೇರಿರುವುದರಿಂದ ಫ್ರೆಂಚ್ ಸದ್ಯ ವಿಜ್ಞಾನಿ ಆಡೆನ್ಸನ್ ಸ್ಮರಣಾರ್ಥವಾಗಿ ಈ ಮರಗಳಿಗೆ ಅನ್ನೋನಿಯಾ ಎಂಬ ಹೆಸರಿಡಲಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅಳಿವಿನಂಚಿನಲ್ಲಿರುವ ವೃಕ್ಷಗಳ ಸಾಲಿಗೆ ಈ ಮರಗಳು ಸೇರಿದ್ದು, ಇವುಗಳು ಸುಮಾರು ೬೦೦೦ ವರ್ಷಗಳವರೆಗೂ ಬದುಕಬಲ್ಲವು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಅಪರೂಪದ ವ್ಯಕ್ತಿಗಳನ್ನು ನೋಡಲೆಂದೇ ವಿವಿಧ ಕಡೆಗಳಿಂದಪ್ರವಾಸಿಗರು ಸವಣೂರಿನ ಹಿರೇಕಲ್ಮಠಕ್ಕೆ ಆಗಮಿಸಿ ಮಠದ ಆವರಣದಲ್ಲಿನ ವೃಕ್ಷರಾಶಿಯ ತರಹ ಕಾಣು ದೊಡ್ಡಹುಣಸೆಮರವೀಕ್ಷಿಸುತ್ತಾರೆ.
ಮರಗಳ ರಕ್ಷಣೆಗೆ ಸರ್ಕಾರ ಮುಂದಾಗಲಿ
ಸವಣೂರಿನ ಹಿರೇಕಲ್ಮಠದ ಆವರಣದಲ್ಲಿನ ಮೂರು ದೊಡ್ಡಹುಣಸೆಮರಗಳು ಹಾವೇರಿಜಿಲ್ಲೆಯ ಪ್ರವಾಸೋಧ್ಯಮದ ಪ್ರಮುಖ ಆಕರ್ಷಣೆಗಳಾಗಿವೆ. ಈ ಮೂರು ಮರಗಳಲ್ಲಿ ಕೊನೆಯದಾಗಿರುವ ಮೂರನೆಯ ೧೨.೫೩ ಮೀ ಸುತ್ತಳತೆ. ೧೮ ಮೀ ಎತ್ತರದ ಮರವು ಉರಳಿ ಬಿಳುವ ಮೂಲಕ ದೊಡ್ಡಹುಣಸೆಮರಗಳು ಅಪಾಯಕ್ಕೆ ಸಿಲುಕಿವಿಯೇ? ಎನ್ನುವ ಆತಂಕ ಎದುರಾಗಿದೆ. ಅನೇಕ ಔಷಧಿಗುಣಗಳನ್ನು ಹೊಂದಿರುವ ಈ ದೊಡ್ಡಹುಣಸೆಮರಗಳನ್ನು ನಮ್ಮ ಮುಂದಿನ ಜನಾಂಗಕ್ಕೆ, ಪರಿಸರ ಅಧ್ಯಯನ ಆಸಕ್ತರ ಅಧ್ಯಯನಕ್ಕಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಯಕಲ್ಪ ಕೊಡುವ ಕೆಲಸ ಅತ್ಯಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾಯೋನ್ಮಕವಾಗಬೇಕಿದೆ.