ಹೇಗಿದೆ ಹಾವೇರಿಯ ಶಾಸಕ-ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಆರೋಗ್ಯ….?

Date:

 

ಹೇಗಿದೆ ಹಾವೇರಿಯ ಶಾಸಕ-ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಆರೋಗ್ಯ….?
ಅಪಘಾತ ನಡೆದ ೧೮ದಿನಗಳಲ್ಲಿ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ- ಆತಂಕದಲ್ಲಿ ಅಭಿಮಾನಿಗಳು!
  ಹಾವೇರಿ: ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ  ಅವರು ಮಾ.೧೪ ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮೊದಲಿಗೆ ಅವರಿಗೆ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ  ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ   ಅವರನ್ನು  ದಾವಣಗೆರೆ ಎಸ್‌ಎಸ್ ಆಸ್ಪತ್ರೆಗೆ ವೈದ್ಯರು ರವಾನಿಸಿದ್ದರು.
ರುದ್ರಪ್ಪ ಲಮಣಿ ಅವರಿಗೆ ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಗಳಾದ ಹಿನ್ನಲೆಯಲ್ಲಿ ( ತಲೆ, ಮುಖ, ವಸಡು, ಮೊಳಕಾಲು, ಎದೆಯಭಾಗಕ್ಕೆ ಗಾಯಗಳಗಿವೆ ಎನ್ನಲಾಗಿದೆ) ಅವರನ್ನು ಮಾ.೧೫ರಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮತ್ತೆ ಅವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಎಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರುದ್ರಪ್ಪ ಲಮಾಣಿ ಅವರ ಕುತ್ತಿಗೆ ಹಿಂಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇದಿಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ರುದ್ರಪ್ಪ ಲಮಾಣಿ ಅವರ ಆಪ್ತರು ತಿಳಿಸಿದ್ದಾರೆ.
 ಅಪಘಾತ ನಡೆದ ೧೮ ದಿನಗಳಲ್ಲಿ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ- ಆತಂಕದಲ್ಲಿ ಅಭಿಮಾನಿಗಳು: ರುದ್ರಪ್ಪ ಲಮಾಣಿ ಅವರು ಅಪಘಾತದಲ್ಲಿ ಗಾಯಗೊಂಡು ಮಾ.೩೧ಕ್ಕೆ ೧೮ದಿನಗಳು ಉರುಳಿದ್ದು, ಇಲ್ಲಿಯವರೆಗೂ ಅವರ ಆರೋಗ್ಯ ಹೇಗಿದೆ? ಎನ್ನುವುದನ್ನು ರುದ್ಪಪ್ಪ ಲಮಾಣಿ ಅವರ ಮನೆಯವರಾಗಲಿ, ಆಸ್ಪತ್ರೆಯವರಾಗಲಿ ಖಚಿತ ಪಡಿಸಿಲ್ಲ. “ರುದ್ರಪ್ಪ ಲಮಾಣಿ ಅವರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ” ಎನ್ನುವ ಬಾಯಿ ಮಾತುಗಳು ಮಾತ್ರ ಕೇಳಿ ಬರುತ್ತಿವೆ. ಅವರ ಆರೋಗ್ಯದ ಬಗ್ಗೆ “ರುದ್ರಪ್ಪ ಅವರ ಮುಂದೆ ಉಗ್ರಪ್ಪನಂತೆ” ಪೋಜು ನೀಡುತ್ತಿದ್ದವರು ಯಾರು ಬಾಯಿ ಬಿಡುತ್ತಿಲ!.
ಅಪಘಾತಕ್ಕೆ ಯಾರು ಹೊಣೆ:  ಹಿರಿಯೂರು ಬಳಿ ರೆಸ್ಟ್ ವೇಳೆ ದ್ವಿಚಕ್ರ ವಾಹನ ಸವರನೋರ್ವ ರುದ್ರಪ್ಪ ಲಮಾಣಿ ಅವರಿಗೆ ಡಿಕ್ಕಿ ಹೊಡೆದು ತಲೆಗೆ, ಮೂಗಿಗೆ ಗಾಯಗಳು ಆದ ಸಂದರ್ಭದಲ್ಲಿ ಸರ್ಕಾರದಿಂದ ನಿಯೋಜಿಸಲ್ಪಟ್ಟಿದ್ದ ಗನ್ ಮ್ಯಾನ್‌ಗಳು ಏನು ಮಾಡುತ್ತಿದ್ದರು?. ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ರಕ್ಷಣೆಗೆಂದು ಸರ್ಕಾರ ಗನ್‌ಮ್ಯಾನ್‌ಗಳನ್ನು ನೇಮಕ ಮಾಡಿದ್ದು, ಅಫಘಾತ ಸಂಭವಿಸುತ್ತಿದ್ದ ಸಂದರ್ಭದಲ್ಲಿ ಗನ್‌ಮ್ಯಾನ್‌ಗಳು ಏನು ಮಾಡುತ್ತಿದ್ದರು? ಅಪಘಾತಕ್ಕೆ ಯಾರು ಹೊಣೆಯಾರು? ಎನ್ನುವ ಪ್ರಶ್ನೆ ರುದ್ರಪ್ಪ ಲಮಾಣಿ ಅವರ ಅಭಿಮಾನಿಗಳು ಹಾಗೂ ಹಾವೇರಿ ಕ್ಷೇತ್ರದ ಜನತೆಯದ್ದಾಗಿದೆ. ಹಾವೇರಿಗೆ ಉಪಸಭಾಪತಿಗಳು ಭೇಟಿ ನೀಡಿದ ವೇಳೆ “ಅಹವಾಲು ಸಲ್ಲಿಸಲು ಬರುವ ಜನರನ್ನು ದನಗಳ ಹಾಗೆ ಕಂಡು ದೂಡುವ ಗನ್‌ಮ್ಯಾನ್‌ಗಳು ರುದ್ರಪ್ಪ ಲಮಾಣಿ ಅವರನ್ನು ಅಪಘಾತದಿಂದ ಏಕೆ ರಕ್ಷಿಸಲಿಲ್ಲ”? ಎನ್ನುವ ಪ್ರಶ್ನೆಯು ಸಹ ಜನರದ್ದಾಗಿದೆ.
ಆಗಾಗ ಕಾಡುವ ಅನಾರೋಗ್ಯ:  ಶಾಸಕರು ಹಾಗೂ ಉಪಸಭಾಪತಿ ಅವರಿಗೆ ಅನಾರೋಗ್ಯ ಕಾಡುವುದು ಹೊಸತೇನಲ್ಲ.  ಈ ಹಿಂದೆ ಅಂದರೆ ಜ.೧ರಂದು ಅವರಿಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ  ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಹೃದಯ ಶಸ್ತ್ರ ಚಿಕಿತ್ಸೆಯಿಂದ  ಅವರು ಚೇತರಿಸಿಕೊಂಡಿದ್ದರು. ನಂತರ ಸೂರಗೊಂಡನಕೊಪ್ಪದಲ್ಲಿ ಕಬಡ್ಡಿ ಟೂರ್ನಿಯ ಉದ್ಘಾಟನಾ ವೇಳೆ ಆಟಗರರನ್ನು ಹುರಿದುಂಬಿಸಲು ಅಂಕಣಕ್ಕಿಳಿದು ರುದ್ರಪ್ಪ ಅವರು ರೈಡು ಮಾಡಲು ಹೋದ ವೇಳೆ ಮಳಕಾಲಿಗೆ ಗಾಯಮಾಡಿಕೊಂಡಿದ್ದರು. ಆ ಗಾಯದಿಂದ ಚೇತರಿಸಿಕೊಂಡಿದ್ದ ಅವರು ಮಾ.೧೪ರಂದು ಹಿರಿಯೂರುಬಳಿ ನಡೆದ ಅಫಘಾತದಲ್ಲಿ ತೀವೃ ತರನಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳಿವೆ.
ರುದ್ರಪ್ಪ ಲಮಾಣಿ ಅವರ ಆರೋಗ್ಯ ವಿಚಾರಿಸಲು ಸಾಕಷ್ಟು ಜನ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಆಸ್ಪತ್ರೆಯವರು ಭೇಟಿಗೆ ಅವಕಾಶ ನೀಡಿಲ್ಲ. ಆದರೆ  ರುದ್ರಪ್ಪ ಲಮಾಣಿ ಅವರ ಆರೋಗ್ಯದ ಬಗ್ಗೆ ರುದ್ರಪ್ಪ ಲಮಾಣಿ ಅವರ ಕುಟುಂಬದವರಾಗಲಿ, ಆಸ್ಪತ್ರೆಯವರಾಗಲಿ ಖಚಿತ ಪಡಿಸಿಲ್ಲ. ಅಪಘಾತ ನಡೆದ ೧೮ದಿನಗಳಲ್ಲಿ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ರುದ್ರಪ್ಪ ಲಮಾಣಿ ಅವರು ಆದಷ್ಟು ಬೇಗ ಗುಣಮುಖರಾಗಲಿ ಎನ್ನುವುದು ಹಾವೇರಿ ವಿಧಾನಸಭಾ ಕ್ಷೇತ್ರದ ಮತದಾರರ ಹಾಗೂ ಅವರ ಅಭಿಮಾನಿಗಳ ಹಾರೈಕೆಯಾಗಿದೆ.
ರುದ್ರಪ್ಪ ಲಮಾಣಿ ಅವರ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಸ್ಟ್ರರ್ ಆಸ್ಪತ್ರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹೇಗಿದೆ ಹಾವೇರಿಯ ಶಾಸಕ-ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಆರೋಗ್ಯ….?
ಅಪಘಾತ ನಡೆದ ೧೮ದಿನಗಳಲ್ಲಿ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ- ಆತಂಕದಲ್ಲಿ ಅಭಿಮಾನಿಗಳು!
  ಹಾವೇರಿ: ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ  ಅವರು ಮಾ.೧೪ ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮೊದಲಿಗೆ ಅವರಿಗೆ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ  ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ   ಅವರನ್ನು  ದಾವಣಗೆರೆ ಎಸ್‌ಎಸ್ ಆಸ್ಪತ್ರೆಗೆ ವೈದ್ಯರು ರವಾನಿಸಿದ್ದರು.
ರುದ್ರಪ್ಪ ಲಮಣಿ ಅವರಿಗೆ ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಗಳಾದ ಹಿನ್ನಲೆಯಲ್ಲಿ ( ತಲೆ, ಮುಖ, ವಸಡು, ಮೊಳಕಾಲು, ಎದೆಯಭಾಗಕ್ಕೆ ಗಾಯಗಳಗಿವೆ ಎನ್ನಲಾಗಿದೆ) ಅವರನ್ನು ಮಾ.೧೫ರಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮತ್ತೆ ಅವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಎಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರುದ್ರಪ್ಪ ಲಮಾಣಿ ಅವರ ಕುತ್ತಿಗೆ ಹಿಂಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇದಿಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ರುದ್ರಪ್ಪ ಲಮಾಣಿ ಅವರ ಆಪ್ತರು ತಿಳಿಸಿದ್ದಾರೆ.
 ಅಪಘಾತ ನಡೆದ ೧೮ ದಿನಗಳಲ್ಲಿ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ- ಆತಂಕದಲ್ಲಿ ಅಭಿಮಾನಿಗಳು: ರುದ್ರಪ್ಪ ಲಮಾಣಿ ಅವರು ಅಪಘಾತದಲ್ಲಿ ಗಾಯಗೊಂಡು ಮಾ.೩೧ಕ್ಕೆ ೧೮ದಿನಗಳು ಉರುಳಿದ್ದು, ಇಲ್ಲಿಯವರೆಗೂ ಅವರ ಆರೋಗ್ಯ ಹೇಗಿದೆ? ಎನ್ನುವುದನ್ನು ರುದ್ಪಪ್ಪ ಲಮಾಣಿ ಅವರ ಮನೆಯವರಾಗಲಿ, ಆಸ್ಪತ್ರೆಯವರಾಗಲಿ ಖಚಿತ ಪಡಿಸಿಲ್ಲ. “ರುದ್ರಪ್ಪ ಲಮಾಣಿ ಅವರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ” ಎನ್ನುವ ಬಾಯಿ ಮಾತುಗಳು ಮಾತ್ರ ಕೇಳಿ ಬರುತ್ತಿವೆ. ಅವರ ಆರೋಗ್ಯದ ಬಗ್ಗೆ “ರುದ್ರಪ್ಪ ಅವರ ಮುಂದೆ ಉಗ್ರಪ್ಪನಂತೆ” ಪೋಜು ನೀಡುತ್ತಿದ್ದವರು ಯಾರು ಬಾಯಿ ಬಿಡುತ್ತಿಲ!.
ಅಪಘಾತಕ್ಕೆ ಯಾರು ಹೊಣೆ:  ಹಿರಿಯೂರು ಬಳಿ ರೆಸ್ಟ್ ವೇಳೆ ದ್ವಿಚಕ್ರ ವಾಹನ ಸವರನೋರ್ವ ರುದ್ರಪ್ಪ ಲಮಾಣಿ ಅವರಿಗೆ ಡಿಕ್ಕಿ ಹೊಡೆದು ತಲೆಗೆ, ಮೂಗಿಗೆ ಗಾಯಗಳು ಆದ ಸಂದರ್ಭದಲ್ಲಿ ಸರ್ಕಾರದಿಂದ ನಿಯೋಜಿಸಲ್ಪಟ್ಟಿದ್ದ ಗನ್ ಮ್ಯಾನ್‌ಗಳು ಏನು ಮಾಡುತ್ತಿದ್ದರು?. ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ರಕ್ಷಣೆಗೆಂದು ಸರ್ಕಾರ ಗನ್‌ಮ್ಯಾನ್‌ಗಳನ್ನು ನೇಮಕ ಮಾಡಿದ್ದು, ಅಫಘಾತ ಸಂಭವಿಸುತ್ತಿದ್ದ ಸಂದರ್ಭದಲ್ಲಿ ಗನ್‌ಮ್ಯಾನ್‌ಗಳು ಏನು ಮಾಡುತ್ತಿದ್ದರು? ಅಪಘಾತಕ್ಕೆ ಯಾರು ಹೊಣೆಯಾರು? ಎನ್ನುವ ಪ್ರಶ್ನೆ ರುದ್ರಪ್ಪ ಲಮಾಣಿ ಅವರ ಅಭಿಮಾನಿಗಳು ಹಾಗೂ ಹಾವೇರಿ ಕ್ಷೇತ್ರದ ಜನತೆಯದ್ದಾಗಿದೆ. ಹಾವೇರಿಗೆ ಉಪಸಭಾಪತಿಗಳು ಭೇಟಿ ನೀಡಿದ ವೇಳೆ “ಅಹವಾಲು ಸಲ್ಲಿಸಲು ಬರುವ ಜನರನ್ನು ದನಗಳ ಹಾಗೆ ಕಂಡು ದೂಡುವ ಗನ್‌ಮ್ಯಾನ್‌ಗಳು ರುದ್ರಪ್ಪ ಲಮಾಣಿ ಅವರನ್ನು ಅಪಘಾತದಿಂದ ಏಕೆ ರಕ್ಷಿಸಲಿಲ್ಲ”? ಎನ್ನುವ ಪ್ರಶ್ನೆಯು ಸಹ ಜನರದ್ದಾಗಿದೆ.
ಆಗಾಗ ಕಾಡುವ ಅನಾರೋಗ್ಯ:  ಶಾಸಕರು ಹಾಗೂ ಉಪಸಭಾಪತಿ ಅವರಿಗೆ ಅನಾರೋಗ್ಯ ಕಾಡುವುದು ಹೊಸತೇನಲ್ಲ.  ಈ ಹಿಂದೆ ಅಂದರೆ ಜ.೧ರಂದು ಅವರಿಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ  ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಹೃದಯ ಶಸ್ತ್ರ ಚಿಕಿತ್ಸೆಯಿಂದ  ಅವರು ಚೇತರಿಸಿಕೊಂಡಿದ್ದರು. ನಂತರ ಸೂರಗೊಂಡನಕೊಪ್ಪದಲ್ಲಿ ಕಬಡ್ಡಿ ಟೂರ್ನಿಯ ಉದ್ಘಾಟನಾ ವೇಳೆ ಆಟಗರರನ್ನು ಹುರಿದುಂಬಿಸಲು ಅಂಕಣಕ್ಕಿಳಿದು ರುದ್ರಪ್ಪ ಅವರು ರೈಡು ಮಾಡಲು ಹೋದ ವೇಳೆ ಮಳಕಾಲಿಗೆ ಗಾಯಮಾಡಿಕೊಂಡಿದ್ದರು. ಆ ಗಾಯದಿಂದ ಚೇತರಿಸಿಕೊಂಡಿದ್ದ ಅವರು ಮಾ.೧೪ರಂದು ಹಿರಿಯೂರುಬಳಿ ನಡೆದ ಅಫಘಾತದಲ್ಲಿ ತೀವೃ ತರನಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳಿವೆ.
ರುದ್ರಪ್ಪ ಲಮಾಣಿ ಅವರ ಆರೋಗ್ಯ ವಿಚಾರಿಸಲು ಸಾಕಷ್ಟು ಜನ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಆಸ್ಪತ್ರೆಯವರು ಭೇಟಿಗೆ ಅವಕಾಶ ನೀಡಿಲ್ಲ. ಆದರೆ  ರುದ್ರಪ್ಪ ಲಮಾಣಿ ಅವರ ಆರೋಗ್ಯದ ಬಗ್ಗೆ ರುದ್ರಪ್ಪ ಲಮಾಣಿ ಅವರ ಕುಟುಂಬದವರಾಗಲಿ, ಆಸ್ಪತ್ರೆಯವರಾಗಲಿ ಖಚಿತ ಪಡಿಸಿಲ್ಲ. ಅಪಘಾತ ನಡೆದ ೧೮ದಿನಗಳಲ್ಲಿ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ರುದ್ರಪ್ಪ ಲಮಾಣಿ ಅವರು ಆದಷ್ಟು ಬೇಗ ಗುಣಮುಖರಾಗಲಿ ಎನ್ನುವುದು ಹಾವೇರಿ ವಿಧಾನಸಭಾ ಕ್ಷೇತ್ರದ ಮತದಾರರ ಹಾಗೂ ಅವರ ಅಭಿಮಾನಿಗಳ ಹಾರೈಕೆಯಾಗಿದೆ.
ರುದ್ರಪ್ಪ ಲಮಾಣಿ ಅವರ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಸ್ಟ್ರರ್ ಆಸ್ಪತ್ರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...