
ಒಳ ಮೀಸಲಾತಿ-ಐತಿಹಾಸಿಕ ತೀರ್ಮಾನ
ಹಾವೇರಿ:ಕ್ಯಾಬಿನೆಟನಲ್ಲಿ ಒಳ ಮೀಸಲಾತಿಯ ಬಗ್ಗೆ ಐತಿಹಾಸಿಕ ತೀರ್ಮಾನವನ್ನು ನೀಡಿದ ರಾಜ್ಯ ಸರ್ಕಾರಕ್ಕೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಲಿತ ಮುಖಂಡ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಸಂಜಯಗಾಂಧಿ ಸಂಜೀವಣ್ಣನವರ ಕೃತಜ್ಞತೆ ಸಲ್ಲಿಸಿದ್ದಾರೆ.ಎಡಗೈ ಸಮುದಾಯಕ್ಕೆ ೫. ೨೫, ಬಲಗೈ ಸಮುದಾಯಕ್ಕೆ ೫.೨೫, ಸ್ಪರ್ಶ ಜಾತಿಗೆ ೪.೫ ಮೀಸಲಾತಿ ಪ್ರಕಟಿಸಲಾಗಿದೆ. ಸಚಿವ ಸಂಪುಟದಲ್ಲಿ ಸುಮಾರು ೩೫ ವರ್ಷದ ಕಾಲ ನಿರಂತರ ಹೋರಾಟ ಮಾಡಿದ ಪ್ರತಿಫಲವಾಗಿ ಇಂದು ಸಚಿವ ಸಂಪುಟದ ಮಹತ್ವದ ಐತಿಹಾಸಿಕ ತೀರ್ಮಾನವನ್ನು ಮಾಡಿದೆ ವಿಶೇಷವಾಗಿ ಎಡಗೈ ಸಮುದಾಯಕ್ಕೆ ಮತ್ತೆ ಸ್ವಾತಂತ್ರ್ಯ ಮರಳಿ ಸಿಕ್ಕಷ್ಟು ಖುಷಿ ಆಗಿದೆ, ಆದರೆ ಇನ್ನೊಂದು ಕಡೆ ದುಃಖ ಸಹ ಆಗುತ್ತದೆ. ಕಾರಣ ಎಡಗೈ ಸಮುದಾಯಕ್ಕೆ ೬ ಪರ್ಸೆಂಟೇಜ್ ನೀಡಬೇಕಿತ್ತು. ಆದರೂ ಕೂಡ ಪರವಾಗಿಲ್ಲ ಇಷ್ಟಾದರೂ ಸಿಕ್ಕಿತ್ತಲ್ಲ ಎಂಬ ಸಮಾಧಾನವಿದೆ. ಎಲ್ಲಾ ಸಚಿವ ಸಂಪುಟದ ಸಚಿವರುಗಳಿಗೆ v ಹೃದಯಪೂರ್ವಕವಾಗಿ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

