
ಒಳ ಮೀಸಲಾತಿ-ಹಸಿದ ಹೊಟ್ಟಗೆ ಅರೆಕಾಸಿನ ಮಜ್ಜಿಗೆ;ಪರಮೇಶ್ವರಪ್ಪ ಮೇಗಳಮನಿ
ಹಾವೇರಿ: ಎಸ್ಸಿ ಒಳಮೀಸಲಾತಿ ಸಂಬಂಧ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ’ಎ’ಗೆ ೫.೨೫%, ’ಬಿ’ಗೆ ೫.೨೫%, ’ಸಿ’ಗೆ ೪.೫೦% ಒಳ ಮೀಸಲಾತಿ ನೀಡಲು ತೀರ್ಮಾನಿಸಿರುವುದು ಸ್ವಾಗತಾರ್ಹವಾದರು, ಒಳಮೀಸಳಾತಿಗೆ ಸಂಬಂಧಿಸಿದಂತೆ ಎಲ್ಲ ಆಯೋಗಗಳು ಎಡಗೈಗೆ ಶೇ.೬ ಮೀಸಲಾತಿ ನೀಡುವಂತೆ ಶಿಪಾರಸು ಮಾಡಿದ್ದವು, ಆದರೆ ರಾಜ್ಯ ಸರ್ಕಾರ ಎಡಗೈಗೆ ೫.೨೫% ಪ್ರಕಟಿಸಿದೆ. ಇದು ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಂತೆ ಎಂದು ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಮುಖಂಡರು ಹಘೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಒಳಮೀಸಲುಜಾರಿಗೆ ಸುಮಾರು ೩೫ ವರ್ಷದ ಕಾಲ ನಿರಂತರ ಹೋರಾಟಮಾಡಲಾಗಿದೆ. ಜಿಲ್ಲೆಯ ಎಲ್ಲ ಶಾಸಕರ ಮನೆ ಹಾಗೂ ಕಾರ್ಯಾಲಯಗಳ ಮುಂದೆ, ಬೆಂಗಳೂರಿನಲ್ಲಿ ನಿರಂತರ ಹೋರಾಟಗಳನ್ನು ಮಾಡಲಾಗಿತ್ತು, ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಶೇ.೧೭ರ ಎಸ್ಸಿ ಒಳಮೀಸಲಾತಿ ಅನ್ವಯ ಎಸ್ಸಿಯನ್ನು ಎ (ಬಲ), ಬಿ (ಎಡ) ಮತ್ತು ಸಿ (ಸ್ಪೃಶ್ಯರು) ಎಂದು ಮೂರು ವರ್ಗೀಕರಣ ಮಾಡಲಾಗಿದೆ. ಅದರಂತೆ ಒಳಮೀಸಲಾತಿ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. “ಶೇ.೧೭ರ ಎಸ್ಸಿ ಒಳಮೀಸಲಾತಿ ಅನ್ವಯ ’ಎ’ಗೆ ೫.೨೫%, ’ಬಿ’ಗೆ ೫.೨೫%, ’ಸಿ’ಗೆ ೪.೫೦% ಒಳ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ.
ಒಳಮೀಸಲಾತಿ ಬರುವ ವಿಧಾನಸಭೆ, ಜಿಲ್ಲಾ ಪಂಚಾಯತ್, ತಲೂಕಾ ಪಂಚಾಯತ್, ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗವಂತೆ ಸರ್ಕಾರ ಮುಂದಾಗಬೇಕು. ಈ ಬಗ್ಗೆ ಸರ್ಕಾರ ಸ್[ಷ್ಟತೆ ನೀಡುವ ಮೂಲಕ ರಾಜಕೀಯವಾಗಿ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಎಲ್ಲರಂಗಗಳಲ್ಲಿ ಸಿಗುವಂತೆ ನೋಡಿಕೊಳ್ಳಬೇಕು, ಇಲ್ಲದೇ ಹೋದರೆ ಈ ಬಗ್ಗೆ ಮತ್ತೆ ಹೋರಾಟವನ್ನು ಹಾವೇರಿಯಿಂದಲೇ ಆರಂಭಿಸುವುದಾಗಿ ಅವರು ಎಚ್ಚರಿಸಿದ್ದಾರೆ.

