
ಹಾವೇರಿ : ಅನುದಾನಿತ ಶಾಲಾ -ಕಾಲೇಜುಗಳ ಹುದೆ ತುಂಬಲು ಒಕ್ಕೂಟದ ಆಗ್ರಹ
ಹಾವೇರಿ : ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆ ಗಳನ್ನು ತುಂಬಲು ಶಿಕ್ಷಣ ಇಲಾಖೆಯವರು ಅನಾವಶ್ಯಕ ವಿಳಂಬ ಮಾಡುತ್ತಿರುವುದನ್ನು ಖಂಡಿಸಿರುವ ಅನುದಾನಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳು ಹಾವೇರಿಯ ಸರ್ಕೀಟ್ ಹೌಸ್ ನಲ್ಲಿ ಜಿಲ್ಲಾಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿಯವರನ್ನು ಭೆಟ್ಟಿಯಾಗಿ ಕೂಡಲೇ ಇಲಾಖೆಯವರು ಅನುಮತಿ ನೀಡಲು ಆಗ್ರಪಡಿಸಿದರು.
೧೯೯೫ ರಿಂದಇಲ್ಲಿಯವರೆಗೆ ಸುಮಾರು ೩೦ ವರ್ಷಗಳಿಂದ ಅನುದಾನರಹಿತ ಶಾಲಾ-ಕಾಲೇಜುಗಳನ್ನು ಅನುದಾನಿಕ್ಕೊಳಡಿಸದೇ ಇರುವುದನ್ನೂ ಸಹ ಸಚಿವರ ಗಮನಕ್ಕೆ ತರಲಾಯಿತು. ಒಕ್ಕೂಟದ ಮನವಿಗೆ ಸ್ಪಂದಿಸಿದ ಸಚಿವರುಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ತಕ್ಷಣ ಹುದ್ದೆತುಂಬಲು ಅನುಮತಿ ನೀಡಬೇಕೆಂದು ಸೂಚಿಸಿದ್ದಾರೆ.
ಅನುದಾನರಹಿತ ಶಾಲೆಗಳಿಗೆ ಅನುದಾನ ನೀಡುವುದು .ಹಳೆಯ ಪಿಂಚಣಿಯೋಜನೆಯನ್ನು ಮುಂದುವರೆಸುವುದು ಹಾಗೂ ಅತಿಥಿಉಪನ್ಯಾಸಕರ ಸೇವೆ ಖಾಯಂ ಗೊಳಿಸುವುದು ಮುಂತಾದ ಸಮಸ್ಯೆಗಳ ಬಗ್ಗೆ ಶಿಕ್ಷಕರ ಮುಖಂಡಡಾ.ಆರ್.ಎಂ.ಕುಬೇರಪ್ಪ ಸಚಿವರ ಗಮನ ಸೆಳೆದು ಮುಂಬರುವ ಸಚಿವ ಸಂಪುಟದ ಸಭೆಯಲ್ಲಿ ಈ ವಿಷಯ ಗಳನ್ನು ಪ್ರಸ್ತಾಪ ಮಾಡಲು ಮನವಿ ಮಾಡಿದ್ದಾರೆ.
ನಂತರ ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಒಕ್ಕೂಟದ ವತಿಯಿಂದ ಸಚಿವರುದ್ರಪ್ಪ ಲಮಾಣಿಯವರನ್ನು ಸನ್ಮಾನಿಸಲಾಯಿತು. ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷ .ವಿ.ಎಸ್.ಬಳ್ಳಾರಿ, ಕಾರ್ಯದರ್ಶಿ ಬಸವರಾಜ ಹಾದಿಮನಿ, ಮಾಜಿ ಶಾಸಕ ಶಿವರಾಜ ಸಜ್ಜನ, ಮುಷ್ಠಿಯವರು, ವಾಸು ಸಾವಕಾರ, ಅಕ್ಕಿ ಹೊಳಿ ವಕೀಲರು,ಅಮರದ, ಸುಭಾಷ ಮಲ್ಲಾಡದ, ಮಲ್ಲನಗೌಡ , ಎಸ್.ಎಚ್.ಹುಚ್ಚಗೊಂಡರ ಹಾಗೂ ಜಲ್ಲೆಯ ಶಾಲಾ-ಕಾಲೇಜುಗಳ ನೂರಾರು ಪ್ರತಿನಿಧಿ ಭಾಗವಹಿಸಿದ್ದರು.

