
ಸತೀಶ್ ಜಾರಕಿಹೊಳಿಯವರ 64 ನೇ ಹುಟ್ಟುಹಬ್ಬ- ಶಾಲಾ ಮಕ್ಕಳಿಗೆ ನೋಟ್ ಬುಕ್ , ಪೆನ್ ವಿತರಣೆ
ಹಾವೇರಿ; ಸಮಾಜಮುಖಿ ಚಿಂತಕರು ಹಾಗೂ ಬುದ್ದ, ಬಸವ, ಡಾ.ಅಂಬೇಡ್ಕರ್ ಅವರ ಅನುಯಾಯಿ ಸತೀಶ್ ಜಾರಕಿಹೊಳಿ ಅವರ ೬೪ನೇ ಹುಟ್ಟು ಹಬ್ಬವನ್ನು ಸೋಮವಾರ ಸತೀಶ್ ಜಾರಕಿಹೊಳಿ ಅಭಿಮಾನಿಗಳ ಬಳಗದ ವತಿಯಿಂದ
ಹಾವೇರಿಯ ಪುರದ ಓಣಿಯಲ್ಲಿರುವ ಸರಕಾರಿ ಶಾಲೆಯ ನಂ.4 ರ ಮಕ್ಕಳಿಗೆ ನೋಟ್ ಬುಕ್ , ಪೆನ್, ಪೆನ್ಸಿಲ್ ವಿತರಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ರಾಜ್ಯದ ಮುಂಚೂಣಿ ನಾಯಕರಾದ ಸತೀಶ್ ಜಾರಕಿಹೊಳಿಯವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಪ್ರತಿ ವರ್ಷವೂ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸುತ್ತಾ ಬಂದಿರುವದು ಸಂತೋಷದ ಸಂಗತಿಯಾಗಿದೆ.
ಜಾರಕಿಹೊಳಿ ಅಭಿಮಾನಿ ನಾಗರಾಜ್ ಬಡಮ್ಮನವರ ಸುಮಾರು 10 ವರ್ಷಗಳಿಂದ ವಿಭಿನ್ನ ರೀತಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ . ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪೆನ್, ಪೆನ್ಸಿಲ್ ವಿತರಿಸಿರುವದು ಬಡ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ . ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್ ಕಚವಿ , ದಾಸಪ್ಪ ಕರ್ಜಿಗಿ, ಶಂಕರ್ .ಮೆಹರವಾಡಿ , ಅತಾವುಲ್ಲಾ ಕಾಜಿ, ಮಲ್ಲಿಕಾರ್ಜುನ್ ಬೂದಗಟ್ಟಿ, .ವಿನಯ್ ಪಾಲಂಕರ, ಜಮೀರ್ ಜಿಗರಿ , ವೆಂಕಟೇಶ್ ಬಿಜಾಪುರ, ಇಮಾಮ್ ಮುಗದೂರು, ಸುರೇಶ್ ಅಳ್ಳಳ್ಳಿ , ಸಾಧಿಕ್ ಕಬ್ಬೂರ, ಉಮರ್ ಇನಾಮ್ದಾರ,ವಮಾಲತೇಶ ರಿತ್ತಿ, ಮುತ್ತಣ್ಣ ಕೊರವರ, ಮೂರ್ತಿ ಕರ್ಜಗಿ, ಆಕಾಶ್ ಕರಿಚಿಕ್ಕಣ್ಣವರ, ಆಸಿಫ್ ಅಹಮದ, ಸುಲೇಮಾನ್ ಜಮಾದಾರ, ಗುಡ್ಡಪ್ಪ ಮುಂತಾದವರು ಭಾಗವಹಿಸಿದ್ದರು.

